ಇಂದೋರ್: ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ಗೆ ಆಯ್ಕೆಯಾಗುವ ಬೌಲಿಂಗ್ ವಿಭಾಗದಲ್ಲಿ ಆಶ್ಚರ್ಯಕರ ಆಯ್ಕೆಯೊಂದು ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ.
ಟೀಮ್ ಇಂಡಿಯಾ ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧ 2ನೇ ಪಂದ್ಯವನ್ನು 7 ವಿಕೆಟ್ಗಳಿಂದ ಜಯಿಸಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ತಂಡದಲ್ಲಿ ಯುವ ಬೌಲರ್ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಪಡಿಸಿದರು. ಜೊತೆಗೆ ವಿಶ್ವಕಪ್ ತಂಡದಲ್ಲಿ ಆಶ್ಚರ್ಯಕರ ಆಯ್ಕೆಯೊಂದು ಇರಲಿದೆ ಎಂಬ ಸುಳಿವು ನೀಡಲಿದ್ದಾರೆ.
ಕರ್ನಾಟಕದ ವೇಗಿ ಪ್ರಸಿದ್ ಕೃಷ್ಣ ಕೊಹ್ಲಿ ಬಾಯಲ್ಲಿ ಬಂತು ಕನ್ನಡಿಗ ಪ್ರಸಿದ್ ಕೃಷ್ಣ ಹೆಸರು
ನಾವು ಬೌಲಿಂಗ್ನಲ್ಲಿ ಉತ್ತಮ ಕೌಶಲ್ಯವುಳ್ಳ ಬೌಲರ್ ಒಬ್ಬರನ್ನ ಆಯ್ಕೆ ಮಾಡಲಿದ್ದೇವೆ. ಆತನೇ ವಿಶ್ವಕಪ್ ತಂಡದ ಒಂದು ಅನಿರೀಕ್ಷಿತ ಆಯ್ಕೆಯಾಗಲಿದ್ದಾನೆ. ಉತ್ತಮ ಪೇಸ್ ಜೊತೆಗೆ ಬೌನ್ಸ್ ಮಾಡುವ ಪ್ರಸಿದ್ ಕೃಷ್ಣ ಅಂತಹವರಿಗೆ ತಂಡದಲ್ಲಿ ಅವಕಾಶ ನೀಡಲಾಗುವುದು ಎಂದು ಕನ್ನಡಿಗನ ಹೆಸರನ್ನು ತಿಳಿಸಿದ್ದಾರೆ.
ಪ್ರಸಿದ್ ಕೃಷ್ಣ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಉತ್ತಮ ಬೌಲಿಂಗ್ ನಡೆಸುತ್ತಿದ್ದಾರೆ. ಈ ರೀತಿಯ ಬೌಲರ್ಗಳನ್ನು ಎಲ್ಲಾ ವಿಭಾಗದಲ್ಲಿ ಹೊಂದಿರುವುದು ಹೆಮ್ಮೆಪಡುವಂತಹ ವಿಷಯ. ವಿಶ್ವಕಪ್ಕಡೆಗೆ ನೋಡುವುದಾದರೆ ನಮ್ಮ ಮುಂದೆ ಸಾಕಷ್ಟು ಆಯ್ಕೆಗಳಿವೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನವದೀಪ್ ಸೈನಿ ಬಗ್ಗೆಯೂ ಮಾತನಾಡಿದ ಕೊಹ್ಲಿ" ನವದೀಪ್ ಏಕದಿನ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಇನ್ನು ಟಿ-20- ಕ್ರಿಕೆಟ್ನಲ್ಲಿ ದಿನದಿಂದ ದಿನಕ್ಕೆ ಅವರ ಆತ್ಮ ವಿಶ್ವಾಸ ಹೆಚ್ಚಾಗುತ್ತಿದೆ. ಆತ ವೇಗದ ಬೌಲಿಂಗ್ ಮೂಲಕ, ಬೌನ್ಸರ್ ಮೂಲಕ ಹಾಗೂ ಯಾರ್ಕರ್ಗಳ ಮೂಲಕ ವಿಕೆಟ್ ಪಡೆಯುವುದನ್ನು ನೋಡುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ತಮ್ಮ ಆರ್ಸಿಬಿ ತಂಡದ ಸಹ ಆಟಗಾರನನ್ನು ಹಾಡಿ ಹೊಗಳಿದ್ದಾರೆ.