ಕರ್ನಾಟಕ

karnataka

ದಯವಿಟ್ಟು ತಂಡದಿಂದ ವಿಜಯ್​ ಶಂಕರ್​ ಕೈಬಿಡಬೇಡಿ: ಪೀಟರ್​ಸನ್​ ಟ್ವೀಟ್​​ನ ಅರ್ಥವೇನು!?

By

Published : Jun 30, 2019, 4:25 AM IST

Updated : Jun 30, 2019, 6:30 AM IST

ವಿಶ್ವಕಪ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ವಿಜಯ್​ ಶಂಕರ್​ ವಿರುದ್ಧ ಈಗಾಗಲೇ ಟೀಕೆ ಕೇಳಿ ಬರುತ್ತಿದ್ದು, ಇದರ ಮಧ್ಯೆ ಕೆವಿನ್​ ಪಿಟರ್​ಸನ್​ ಟ್ವೀಟ್​ ಮಾಡಿದ್ದಾರೆ.

ವಿಜಯ್​ ಶಂಕರ್​

ಬರ್ಮಿಂಗ್​​ಹ್ಯಾಮ್​​:ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಇಂದು ಇಂಗ್ಲೆಂಡ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಸೆಮಿಫೈನಲ್​ಗೆ ಲಗ್ಗೆಹಾಕುವ ಕನಸು ಕಾಣುತ್ತಿದೆ.

ಶಿಖರ್​ ಧವನ್​ ಗಾಯಗೊಂಡು ತಂಡದಿಂದ ಹೊರಬಿದ್ದ ಬಳಿಕ ಆಡುವ 11ರಲ್ಲಿ ಅವಕಾಶ ಪಡೆದುಕೊಂಡಿರುವ ಆಲ್​ರೌಂಡರ್​ ವಿಜಯ್​ ಶಂಕರ್​ ಬ್ಯಾಟಿಂಗ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡುತ್ತಿಲ್ಲ. ಪಾಕ್​ ವಿರುದ್ಧ ಅಜೇಯ 15ರನ್​ಗಳಿಸಿದ್ದ ವಿಜಯ್​ ಶಂಕರ್​, ಅಫ್ಘಾನ್​ ವಿರುದ್ಧ 29ರನ್​ ಹಾಗೂ ವೆಸ್ಟ್​ ಇಂಡೀಸ್​ ವಿರುದ್ಧ 14ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದಾರೆ. ಈಗಾಗಲೇ ಇವರ ಬ್ಯಾಟಿಂಗ್​ ಬಗ್ಗೆ ಟೀಕೆಗಳು ಶುರುವಾಗಿದ್ದು, ಅವರನ್ನ ತಂಡದಿಂದ ಕೈಬಿಡಲು ಕ್ರೀಡಾಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಇದರ ಮಧ್ಯೆ ಕೆವಿನ್ ಪಿಟರ್​ಸನ್​ ಟ್ವೀಟ್​ ಮಾಡಿದ್ದು, ಡಿಯರ್​​ ವಿರಾಟ್​ ಹಾಗೂ ರವಿಶಾಸ್ತ್ರಿಯವರೇ, ದಯವಿಟ್ಟು ವಿಜಯ್​ ಶಂಕರ್​ಗೆ ಅವಕಾಶ ನೀಡಿ, ಇಂದಿನ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಅವರು ನಿಜವಾಗಿಯೂ ಮಿಂಚುತ್ತಾರೆ. ಜತೆಗೆ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದಿದ್ದು, ರಿಷಭ್​ ಪಂತ್​ಗೆ ಅವಕಾಶ ನೀಡಿದರೆ, ಟೂರ್ನಿಗೆ ಸಜ್ಜಾಗಲು ಮೂರು ವಾರಗಳು ಬೇಕಾಗುತ್ತವೆ ಎಂದಿದ್ದಾರೆ.

ವಿಜಯ್​ ಶಂಕರ್​ ಅವರನ್ನ ತಂಡದಿಂದ ಕೈಬಿಡುವ ದೃಷ್ಠಿಯಲ್ಲಿ ಕೆವಿನ್ ಹೇಳಿದ್ದಾರೊ ಅಥವಾ ಅವರನ್ನ ತಂಡದಲ್ಲೇ ಮುಂದುವರಿಸುವಂತೆ ಸಲಹೆ ನೀಡಿದ್ದಾರೊ ಎಂಬುದು ಇಲ್ಲಿ ಗೊಂದಲ ಸೃಷ್ಠಿಸಿದೆ.

Last Updated : Jun 30, 2019, 6:30 AM IST

ABOUT THE AUTHOR

...view details