ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಆಂಧ್ರಪ್ರದೇಶ ತಂಡವನ್ನು ಮಣಿಸಿ ಪಂಜಾಬ್ ತಂಡದೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜ್ಯ ತಂಡಕ್ಕೆ ರಾಹುಲ್(33) ಹಾಗೂ ದೇವದತ್ ಪಡಿಕ್ಕಲ್(44) ಮೊದಲ ವಿಕೆಟ್ಗೆ 68 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ರು. ನಂತರ ಬಂದ ಕರುಣ್ ನಾಯರ್ 24 ರನ್ಗಳಿಸಿ ಔಟಾದರು.
ತಮ್ಮ ಎಂದಿನ ಫಾರ್ಮ್ ಮುಂದುವರಿಸಿದ ಪಾಂಡೆ(50) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರೆ, ಕೊನೆಯಲ್ಲಿ ಅಬ್ಬರಿಸಿದ ಕೀಪರ್ ಶರತ್ 38 ಎಸೆತಗಳಲ್ಲಿ 45, ಕೆ.ಗೌತಮ್ 16 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಸಹಿತ 34 ರನ್ಗಳಿಸಿ 278 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
279 ರನ್ಗಳ ಗುರಿ ಪಡೆದ ಆಂಧ್ರಪ್ರದೇಶ ತಂಡ 46.5 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ 53 ರನ್ಗಳ ಸೋಲುಕಂಡಿತು. ಶ್ರೇಯಸ್ ಗೋಪಾಲ್ 4, ಪ್ರಸಿದ್ ಕೃಷ್ಣ 3 ವಿಕೆಟ್ ಪಡೆದು ಮಿಂಚಿದರೆ, ಇವರಿಗೆ ಸಾಥ್ ನೀಡಿದ ಮಿಥುನ್, ಗೌತಮ್ ಹಾಗೂ ಮೋರೆ ತಲಾ ಒಂದು ವಿಕೆಟ್ ಪಡೆದು ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. 78 ರನ್ಗಳಿಸಿದ ಪ್ರಶಾಂತ್ ಕುಮಾರ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಪಂಜಾಬ್ ತಂಡದೊಂದಿಗೆ ಅಗ್ರಸ್ಥಾನಕ್ಕೇರಿತು. ಆದರೆ, ರನ್ರೇಟ್ ಆಧಾರದ ಮೇಲೆ ಪಂಜಾಬ್ ಮುಂದಿದೆ.
ಪಾಂಡೆ ಗರಿಷ್ಠ ರನ್:
ವಿಜಯ ಹಜಾರೆ ಆರಂಭದ ಪಂದ್ಯದಿಂದಲೂ ಉತ್ತಮ ಬ್ಯಾಟಿಂಗ್ ಕಾಯ್ದುಕೊಂಡಿರುವ ಮನೀಷ್ ಪಾಂಡೆ 342 ರನ್ಗಳಿಸುವ ಟೂರ್ನಿಯಲ್ಲೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸೇರಿದೆ.