ನವದೆಹಲಿ :ಭಾರತದ ಬೌಲಿಂದ ದಾಳಿ ಎದುರಿಸಲಾಗಿದೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ತುಂಬಾ ಕಷ್ಟಪಡುತ್ತಿರುವುದು ಟೆಸ್ಟ್ ಸರಣಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಪ್ರವಾಸಿಗರು ಆಸ್ಟ್ರೇಲಿಯಾದ ಈ ದುರ್ಬಲತೆಯ ಲಾಭ ಪಡೆದು ಸರಣಿ ವಶಪಡಿಸಿಕೊಳ್ಳಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಭಾರತದ ವಿರುದ್ಧದ ಮೊದಲೆರಡು ಟೆಸ್ಟ್ಗಳಲ್ಲಿ 200ರ ಗಡಿದಾಟಲು ವಿಫಲರಾಗಿರುವ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಭಾರತದ ಬ್ಯಾಟ್ಸ್ಮ್ಗಳಿಗಿಂತ ದುರ್ಬಲರು ಎಂದು ಗೌತಿ ಅಭಿಪ್ರಾಯಪಟ್ಟಿದ್ದಾರೆ.
"ನಾವು ಆಸ್ಟ್ರೇಲಿಯಾ ವಿರುದ್ಧ ಈ ಅವಕಾಶವನ್ನು ಪಡೆದುಕೊಳ್ಳಬಹುದು. ನೀವು ವಿಶ್ವದ ಟಾಪ್ ತಂಡಗಳ ಮೊದಲ 4 ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಗಮನಿಸಿದರೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳಿಗಿಂತ ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ಗಳು ಉತ್ತಮರು.