ಸುಮಾರು ಎರಡೂವರೆ ತಿಂಗಳ ಲಾಕ್ಡೌನ್ ಬಳಿಕ ಬಹುತೇಕ ಎಲ್ಲಾ ಮನರಂಜನಾ ವಾಹಿನಿಗಳು ಹೊಸ ರೂಪದಲ್ಲಿ ಬರುತ್ತಿವೆ. ಉದಯ ವಾಹಿನಿ ಕೂಡಾ ಹೊಸ ಕಾರ್ಯಕ್ರಮಗಳನ್ನು ಹೊಸ ರೂಪದಲ್ಲಿ ಪ್ರಸಾರ ಮಾಡುತ್ತಿದೆ. ವೀಕ್ಷಕರನ್ನು ಸೆಳೆಯಲು ಬೆಳ್ಳಿತೆರೆಯ ಖ್ಯಾತ ನಟ ನಟಿಯರನ್ನು ಅತಿಥಿ ಪಾತ್ರದಲ್ಲಿ ನಟಿಸಲು ವಾಹಿನಿ ಆಹ್ವಾನಿಸಿದೆ.
'ಸೇವಂತಿ' ಧಾರಾವಾಹಿಯಲ್ಲಿ ಪ್ರಿಯಾಂಕ ಉಪೇಂದ್ರ ಬೆಂಗಾಳಿ ಬೆಡಗಿ, ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಇದೀಗ ಕಿರುತೆರೆಯಲ್ಲಿ ಅಭಿನಯಿಸುತ್ತಿರುವ ವಿಚಾರ ನಿಮಗೆ ಗೊತ್ತು. ಸಿನಿಮಾ ಕಲಾವಿದರು ಧಾರಾವಾಹಿಯಲ್ಲಿ ನಟಿಸುವುದು ಮಾಮೂಲು ಸಂಗತಿ. ಆದರೆ ಪ್ರಿಯಾಂಕ ಇಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ. 'ಸೇವಂತಿ' ಧಾರಾವಾಹಿ ಈಗಾಗಲೇ ವೀಕ್ಷಕರ ಮನಸ್ಸು ಗೆದ್ದಿದೆ. ಇದಕ್ಕೆ ಈ ಧಾರಾವಾಹಿ ಯಶಸ್ವಿ 300 ಸಂಚಿಕೆಗಳನ್ನು ಪೂರೈಸಿರುವುದೇ ಸಾಕ್ಷಿ. ಧಾರಾವಾಹಿಯಲ್ಲಿ ಪ್ರಿಯಾಂಕ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವುದಕ್ಕೆ ಕಿರುತೆರೆಪ್ರಿಯರು ಕೊಂಡಾಡಿದ್ದಾರೆ.
'ಸೇವಂತಿ' ಧಾರಾವಾಹಿಯಲ್ಲಿ ಪ್ರಿಯಾಂಕ ಉಪೇಂದ್ರ ಮೋಸಕ್ಕೆ ಒಳಗಾಗಿ ಜೈಲಿಗೆ ಹೋಗಿರುವ ತನ್ನ ಸಾಕು ತಂದೆಯನ್ನು ಹೊರ ತರಲು ನಾಯಕಿ ಸೇವಂತಿ ಒಂದು ವರ್ಷದ ಒಪ್ಪಂದದ ಮೇರೆಗೆ ನಾಯಕ ಅರ್ಜುನ್ ಕೈ ಹಿಡಿಯುತ್ತಾಳೆ. ಕಾಲ ಕ್ರಮೇಣ ಅರ್ಜುನ್ ಪ್ರೀತಿಯನ್ನು ಪಡೆಯುವ ಸೇವಂತಿ ಅವನನ್ನು ಪ್ರೀತಿಸಲು ಆರಂಭಿಸುತ್ತಾಳೆ.
'ಸೇವಂತಿ' ಧಾರಾವಾಹಿಯಲ್ಲಿ ಪ್ರಿಯಾಂಕ ಉಪೇಂದ್ರ ಧಾರಾವಾಹಿ ಎಂದರೆ ಕೇವಲ ನಾಯಕ ನಾಯಕಿ ಮಾತ್ರವಲ್ಲ ವಿಲನ್ ಕೂಡಾ ಇರಬೇಕಲ್ವೇ. ಈ ಧಾರಾವಾಹಿಯಲ್ಲಿ ಕೂಡಾ ಪ್ರಿಯಾ ಎಂಬ ವಿಲನ್ ಇದ್ದಾರೆ. ತಾನು ಮಾಡಿರುವ ತಪ್ಪಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾಯಕನ ತಮ್ಮ ಅಶ್ವಿನ್ನನ್ನು ಮದುವೆಯಾಗಲು ಪ್ರಿಯಾ ಐಡಿಯಾ ಮಾಡುತ್ತಾಳೆ. ಈ ಮದುವೆ ವಿಚಾರವಾಗಿ ಮನೆಯಲ್ಲಿ ಪ್ರಸ್ತಾಪ ಕೂಡಾ ನಡೆಯುತ್ತದೆ. ಈ ಗಂಭೀರ ಸಮಸ್ಯೆಯನ್ನು ಸೇವಂತಿ ಹೇಗೆ ಪರಿಹರಿಸುತ್ತಾಳೆ. ಅದಕ್ಕೆ ಬೆಂಗಾಳಿ ಚೆಲುವೆ ಪ್ರಿಯಾಂಕ ಉಪೇಂದ್ರ ಹೇಗೆ ಸಹಾಯ ಮಾಡುತ್ತಾರೆ ಎಂಬ ಪ್ರಶ್ನೆಗೆ ಈ ವಾರ ಉತ್ತರ ದೊರೆಯಲಿದೆ.