ಅಡಿಕೆ ಟೀ ಸಂಶೋಧಕ ನಿವೇದನ್ ನೆಂಪೆ, ಈ ವಾರ 'ವೀಕೆಂಡ್ ವಿಥ್ ರಮೇಶ್' ಗ್ರ್ಯಾಂಡ್ ಫಿನಾಲೆಯ ಅಪರೂಪದ ಅತಿಥಿಯಾಗಿದ್ದಾರೆ. ಮಲೆನಾಡು ಶಿವಮೊಗ್ಗದ ಮಂಡಗದ್ದೆಯ ಯುವ ವಿಜ್ಞಾನಿ ಮಂಗನ ಕಾಯಿಲೆಗೆ ಔಷಧಿ ಕಂಡುಹಿಡಿದು ಭೇಷ್ ಎನಿಸಿಕೊಂಡಿದ್ದರು. ಡಿಎಂಪಿ ಎಣ್ಣೆಯಿಂದ ತಯಾರಾದ ನಾಟಿ ಔಷಧಿ ಕೆಎಫ್ಡಿಆರ್ಜೆಲ್ ಸಂಶೋಧಿಸಿದವರು ಇವರೇ. ಹೀಗೆ ಹಲವು ಹೊಸ ಸಂಶೋಧನೆಗಳ ಹರಿಕಾರ 4ನೇ ಸೀಸನ್ನ 'ವೀಕೆಂಡ್ ವಿತ್ ರಮೇಶ್' ಗ್ರ್ಯಾಂಡ್ ಫಿನಾಲೆಯಲ್ಲಿ ಸಾಧಕರ ಸೀಟಿನ ಮೇಲೆ ಆಸೀನರಾಲಿದ್ದಾರೆ.
ಒಂದು ಹೊತ್ತಿನ ಊಟಕ್ಕೆ ಪರದಾಡುವಂತ ಸ್ಥಿತಿಯಲ್ಲಿದ್ದ ನಿವೇದನ್, ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಗಿಸಿದರು. ಫಾರ್ಮಸಿಯಲ್ಲಿ ಪದವಿ ಪಡೆದರೂ ಊಟಕ್ಕೆ ದುಡ್ಡಿಲ್ಲದೇ ಕೇವಲ ಟೀ ಕುಡಿದು ದಿನ ಕಳೆದವರು.