ಬಿಗ್ ಬಾಸ್ ಸೀಸನ್ 8ರ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಯಾರು? ಎಂಬುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಪತ್ರಕರ್ತ, ಸಿನಿಮಾ ನಿರ್ದೇಶಕ ಚಂದ್ರಚೂಡ ಚಕ್ರವರ್ತಿ ನಿನ್ನೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ನೊಂದಿಗೆ ಎಂಟ್ರಿ ಕೊಡುವ ಮೂಲಕ ಒಂಟಿ ಮನೆಯ ಸದಸ್ಯರಿಗೆ ಶಾಕ್ ಕೊಟ್ಟರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಚಕ್ರವರ್ತಿ ಚಂದ್ರಚೂಡ ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಚೈತ್ರಾ ಕೋಟೂರ್
ಮೊದಲ ದಿನವೇ ಮನೆ ಸದಸ್ಯರನ್ನು ಆಪ್ತತೆಯಿಂದ ಮಾತನಾಡಿಸಿದ ಚಂದ್ರಚೂಡ ಚಕ್ರವರ್ತಿ ತಮ್ಮನ್ನು ಪರಿಚಯಿಸಿಕೊಂಡರು. ಮನೆಯೊಳಗಿನವರನ್ನು ಹೊರಗಿನಿಂದ ಕಂಡು ಬಂದಿದ್ದರಿಂದ ಸದಸ್ಯರಿಗೆ ಅಂಕಗಳನ್ನು ನೀಡಿದರು. ಮನೆಯ ಎಲ್ಲ ಸದಸ್ಯರಿಗಿಂತಲೂ ನಿಧಿ ಸುಬ್ಬಯ್ಯರಿಗೆ 10ಕ್ಕೆ 6 ಅಂಕಗಳನ್ನು ನೀಡುವ ಮೂಲಕ ಅವರ ಜೊತೆಗಿನ ಸ್ನೇಹವನ್ನು ಹೆಚ್ಚಿಸಿಕೊಂಡರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಚಕ್ರವರ್ತಿ ಚಂದ್ರಚೂಡ ಮನೆಯ ಮತ್ತಿತರ ಸದಸ್ಯರಾದ ರಾಜೀವ್ಗೆ 1, ಶಂಕರ್ ಅವರಿಗೆ 0, ಮಂಜುಗೆ 2, ವಿಶ್ವನಾಥ್ ಅರ್ಧ, ಶುಭ ಪೂಂಜಾ 2, ಅರವಿಂದ್ 3, ಶಮಂತ್ ಅರ್ಧ, ದಿವ್ಯಾ ಉರುಡುಗ 2, ವೈಷ್ಣವಿ 3 ಹೀಗೆ... ಎಲ್ಲರಿಗೂ ಅಂಕಗಳನ್ನು ನೀಡಿದರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಚಕ್ರವರ್ತಿ ಚಂದ್ರಚೂಡ ನಮ್ಮೊಳಗಿರುವ ನೋವು ಹಾಗೂ ಪ್ರೀತಿಯನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು. ಇದು ಮನುಷ್ಯನ ಮೂಲ ಗುಣ. ಆದರೆ, ನಿಧಿ ಒಂದೇ ಒಂದು ಕ್ಷಣ ನೋವಿನ ಮುಖವನ್ನು ಯಾರೊಂದಿಗೂ ತೋರಿಸಿಕೊಂಡಿಲ್ಲ. ಯಾರೊಂದಿಗೂ ಹಂಚಿಕೊಂಡಿಲ್ಲ. ಆದರೆ, ಅವರ ನೋವು ಏನೆಂಬುವುದು ನನಗೆ ಗೊತ್ತು. ''ಯಾರನ್ನು ತೋಳಿಗೆ ಸೇರಿಸಿಕೊಳ್ಳದೆ, ತೋಳದ ಗುಂಪಿನಲ್ಲಿ ಒಂದಾಗದೇ, ಯಾರ ಭಾವ-ಬಂಧನದಲ್ಲಿ ಒಂದಾಗದೇ, ಯಾರಿಗೂ ಬಾಹುವನ್ನು ಕೊಡದೇ ತನ್ನಷ್ಟಕ್ಕೆ ತಾನು ತಬ್ಬಿಕೊಂಡಿರುವುದಕ್ಕೆ ಮರಕ್ಕೆ ಮಾತ್ರ ಸಾಧ್ಯ" ಅದೇ ಗುಣ ನಾನು ನಿಧಿ ಸುಬ್ಬಯ್ಯ ಅವರಲ್ಲಿ ಕಂಡಿದ್ದೇನೆ. ಹೀಗಾಗಿ, ನಾನು ಅವರಿಗೆ ಅತೀ ಹೆಚ್ಚು ಅಂಕ ನೀಡುತ್ತೇನೆ ಎಂದು ತಾವು ಕೊಟ್ಟ ಅಗ್ರ ಅಂಕಗಳ ಬಗ್ಗೆ ತಿಳಿಸಿದರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಚಕ್ರವರ್ತಿ ಚಂದ್ರಚೂಡ ಇದನ್ನೂ ಓದಿ: ಜೈಲಿನಲ್ಲಿ ಸತ್ಯಾಗ್ರಹ ಆರಂಭಿಸಿದ ಪ್ರಶಾಂತ್ ಸಂಬರಗಿ
ಚಂದ್ರಚೂಡ ಅವರು ಪ್ರಶಾಂತ್ ಸಂಬರಗಿ ಅವರ ಆಪ್ತರು ಅನ್ನೋದು ಇನ್ನೊಂದು ವಿಶೇಷ. ಮನೆ ಪ್ರವೇಶಿಸುತ್ತಿದ್ದಂತೆಯೇ, ಏರುಧ್ವನಿಯಲ್ಲಿ ಮಾತನಾಡುತ್ತಾ, ತಮ್ಮ ಬಗ್ಗೆ ಹೇಳಿಕೊಂಡರು. ಪವಾಡ ಪುರುಷರೊಬ್ಬರ ಬಗ್ಗೆ ಕೆಲವು ಸಾಲು ಬರೆದಿದ್ದೆ. ಅವರು ನಕಲಿ ಪವಾಡ ಪುರುಷ ಎಂದು ಬರೆದಿದ್ದರಿಂದ 96 ದಿನ ಜೈಲಿನಲ್ಲಿರಬೇಕಾಯಿತು ಎಂದು ಅಂದಿನ ದಿನಮಾನಗಳನ್ನು ಮನೆ ಸದಸ್ಯರ ಮುಂದೆ ಬಿಚ್ಚಿಟ್ಟರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಚಕ್ರವರ್ತಿ ಚಂದ್ರಚೂಡ