ಕರ್ನಾಟಕ

karnataka

ETV Bharat / sitara

ಅರುಂಧತಿ, ನಾಗರಹಾವು ಚಿತ್ರ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ

ಹೈದರಾಬಾದ್​: ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್​ನ ಖ್ಯಾತ ನಿರ್ದೇಶಕ ಕೋಡಿರಾಮಕೃಷ್ಣ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

By

Published : Feb 22, 2019, 5:02 PM IST

ನಿರ್ದೇಶಕ ಕೋಡಿ ರಾಮಕೃಷ್ಣ

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ನಿರ್ದೇಶನ ಮಾಡಿರುವ ಕೊಡಿ ರಾಮಕೃಷ್ಣ, ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲೋಕೋಲ್​​ನಲ್ಲಿ ಜನಿಸಿದ್ದರು. ಚಲನಚಿತ್ರ ಗಣ್ಯರು ಟ್ವೀಟ್ ಮಾಡುವ ಮೂಲಕ ರಾಮಕೃಷ್ಣ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಇನ್ನು ಇವರು ನಿರ್ದೇಶನದ ಅರುಂಧತಿ ಚಿತ್ರ ಸೂಪರ್ ಹಿಟ್ ಆಗಿತ್ತು. ಇವರ ಕೊನೆಯ ಚಿತ್ರ ನಾಗರಹಾವು ಕನ್ನಡದಲ್ಲಿ 2016 ರಿಲೀಸ್ ಆಗಿತ್ತು. ರಮ್ಯ ನಟಿಸಿದ್ದ ಈ ಚಿತ್ರದಲ್ಲಿ ಗ್ರಾಫಿಕ್ಸ್​ ಮೂಲಕ ವಿಷ್ಣುವರ್ಧನ್​ ಅವರನ್ನು ಮರುಸೃಷ್ಟಿ ಮಾಡಲಾಗಿತ್ತು. ಅವರ ಹಲವು ಚಿತ್ರಗಳಿಗೆ ಫಿಲ್ಮ್ ಫೇರ್ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿದ್ದವು.

ABOUT THE AUTHOR

...view details