ಕರ್ನಾಟಕ

karnataka

ETV Bharat / sitara

ಈಗ ಏನಿದ್ರೂ ಹಣ ಮಾಡೋ ಕಡೆ ನನ್ನ ಗುರಿ.. ಇದು ಕ್ರೇಜಿಸ್ಟಾರ್ ರವಿಚಂದ್ರನ​ ಮಾತು..

ನಾನು ಈಗ ಹಣ ಮಾಡಬೇಕು ಎಂದು ಗುರಿ ಇಟ್ಟಿದ್ದೇನೆ ಹಾಗೂ ನಾನು ಅದನ್ನು ಮುಟ್ಟುತ್ತೇನೆ ಎಂಬ ಆಶಾಭಾವನೆಯನ್ನೂ ಕ್ರೇಜಿಸ್ಟಾರ್​ ವ್ಯಕ್ತಪಡಿಸಿದ್ದಾರೆ.

By

Published : Aug 12, 2019, 10:41 AM IST

ರವಿಚಂದ್ರನ್​

ಕನ್ನಡ ಚಿತ್ರ ರಂಗದ ಕನಸುಗಾರ ವಿ. ರವಿಚಂದ್ರನ್​ ತಮ್ಮ ಮಗಳು ಅಂಜಲಿ ಮದುವೆ ಸಮಯದಲ್ಲಿ ಜೀವನದಲ್ಲಿ ದುಡ್ಡು ಮಾಡಬೇಕು ಅಂತಾ ನನಗೆ ಈಗ ಅನಿಸ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದರು.

ಈ ಬಗ್ಗೆ 'ರವಿ ಬೋಪಣ್ಣ' ಸಿನಿಮಾ ಬಗ್ಗೆ ಮಾತನಾಡುವಾಗ ಕ್ರೇಜಿ ಸ್ಟಾರ್​ ಪ್ರತಿಕ್ರಿಯಿಸಿ, ನಾನು ಈಗ ಹಣ ಮಾಡಬೇಕು ಎಂದು ಗುರಿ ಇಟ್ಟಿದ್ದೇನೆ ಹಾಗೂ ನಾನು ಅದನ್ನು ಮುಟ್ಟುತ್ತೇನೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ರು. ಅವರ ಈ ಮಾತಿನಲ್ಲಿ ಹೆಚ್ಚು ಆತ್ಮವಿಶ್ವಾಸ ಇರುವುದಕ್ಕೆ ಕಾರಣ ಅವರದೇ ನಿರ್ಮಾಣ, ನಿರ್ದೇಶನ, ನಟನೆ, ಸಂಗೀತ ಇರುವ ‘ರಾಜೇಂದ್ರ ಪೊನ್ನಪ್ಪ’ ಸಿನಿಮಾ ಬಗ್ಗೆ. ಈ ಸಿನಿಮಾದ ಕೇವಲ 30ರಷ್ಟು ಚಿತ್ರೀಕರಣ ಬಾಕಿ ಇದೆ. ‘ರವಿ ಬೋಪಣ್ಣ’ ಬಿಡುಗಡೆ ನಂತರ ಆ ಸಿನಿಮಾ ಚಾಲನೆಗೊಳ್ಳುತ್ತದೆ.

ರವಿಚಂದ್ರನ್​ ದುಡ್ಡು ಮಾಡಬೇಕು ಅಂದುಕೊಳ್ಳದೇ ಇರುವಾಗ್ಲೇ ಶಾಂತಿ ಕ್ರಾಂತಿ ಅಂತಹ ಸಿನಿಮಾಕ್ಕೆ ಐದು ಕೋಟಿ ಖರ್ಚು ಮಾಡಿ ಸೋಲು ಕಂಡಿದ್ರು. 'ರಣಧೀರ' ಸಿನಿಮಾಕ್ಕೆ 1.5 ಕೋಟಿ ವೆಚ್ಚ ಮಾಡಿ ಗೆಲುವು ಸಾಧಿಸಿದ್ದಾರೆ, ‘ಮಲ್ಲ’ಸಿನಿಮಾ ಆವಾಗ್ಲೇ 10 ಕೋಟಿ ರೂಪಾಯಿ ಗಳಿಕೆ ಮಾಡಿ ತೋರಿಸಿತ್ತು. ನನಗೆ ಬ್ಯಾಂಕ್​ನಲ್ಲಿ ದುಡ್ಡು ಇದ್ರೇ ನಿದ್ದೆ ಬರೋದಿಲ್ಲ. ಹಣವನ್ನು ನಾನು ಸಿನಿಮಾಗಳಿಗೆ ಖರ್ಚು ಮಾಡುತ್ತಾ ಹೋಗುತ್ತೇನೆ ಎನ್ನುತ್ತಾರೆ ರವಿಮಾಮ. ಆದರೆ, ಈಗೀಗ ವ್ಯಾಪಾರವೇ ಮುಖ್ಯ ಅನ್ನಿಸೊಕ್ಕೇ ಶುರು ಆಗಿದೆ. ಹಾಗಾಗಿ ನನ್ನ ಗುರಿ ಏನಿದ್ದರೂ ದುಡ್ಡು ಮಾಡುವುದರ ಬಗ್ಗೆ ಎಂದು ನಿಸ್ಸಂಶಯವಾಗಿ ಹೇಳುತ್ತಾರೆ.

‘ರವಿ ಬೋಪಣ್ಣ’ ಸೈಬರ್​ ಕ್ರೈಂ ಕುರಿತಾದ ಚಿತ್ರವಾಗಿದ್ದು, ರವಿಚಂದ್ರನ್​ ಅವರೇ ಚಿತ್ರದ ನಿರ್ದೇಶಕ, ನಟ, ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ್​ ಅಜಿತ್​ ಹಾಗೂ ಜಗದೀಶ್​ ಚಿತ್ರಕ್ಕೆ ಬಂಡವಾಳ ಹೊಡಿದ್ದಾರೆ. ಚಿತ್ರದಲ್ಲಿ ಮುಖ್ಯವಾಗಿ ಗಡ್ಡ ಬೇಕಾಗಿರುವುದರಿಂದ ರವಿಮಾಮ ಗಡ್ಡ ಬಿಟ್ಟಿದ್ದಾರೆ.

ABOUT THE AUTHOR

...view details