ಶಿವ.. ಇದು ಈ ಹಿಂದೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ದೊಡ್ಡಮಟ್ಟದ ಸದ್ದು ಮಾಡಿದ್ದ ಸಿನಿಮಾ. 2012ರಲ್ಲಿ ಶಿವ ಅನ್ನೋ ಟೈಟಲ್ ಇರುವ ಚಿತ್ರ ಶಿವರಾಜ್ ಕುಮಾರ್ ಅಭಿನಯದಲ್ಲಿ ತೆರೆಗೆ ಬಂದಿತ್ತು. ಇದೀಗ ಮತ್ತೆ ಶಿವ ಎಂಬ ಟೈಟಲ್ನೊಂದಿಗೆ ಗಾಂಧಿನಗರದಲ್ಲಿ ತೆರೆಕಾಣೋಕೆ ಸಿದ್ಧವಾಗಿದೆ.
ಮಂಡ್ಯದ ರೈತ ಹಾಗೂ ರಂಗಭೂಮಿ ಕಲಾವಿದ ರಘು ವಿಜಯ ಕಸ್ತೂರಿ ಚೊಚ್ಚಲ ಬಾರಿಗೆ ನಟನೆ ಜೊತೆಗೆ ನಿರ್ದೇಶನ ಹಾಗೂ ಚಿತ್ರ ನಿರ್ಮಾಣ ಮಾಡಿದ್ದಾರೆ. ಶಿವ ಎಂಬ ಮಾಸ್ ಟೈಟಲ್ ಇಟ್ಟು, ಮಂಡ್ಯದ ಹಳ್ಳಿಯಲ್ಲಿರುವ ಲೋಕಲ್ ರೌಡಿಸಂ, ಲವ್ ಸ್ಟೋರಿ ಹಾಗೂ ಲೋಕಲ್ ಪಾಲಿಟಿಕ್ಸ್ ಬಗ್ಗೆ ಕಥೆ ಹೇಳ ಹೊರಟ್ಟಿದ್ದಾರೆ. ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ನಾಟಕಗಳನ್ನ ಮಾಡಿರುವ ರಘು ಸಾಕಷ್ಟು ಜನ ರಂಗಭೂಮಿ ಕಲಾವಿದರನ್ನ ಒಟ್ಟುಗೂಡಿಸಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.