ಕರ್ನಾಟಕ

karnataka

ETV Bharat / sitara

'ರಾಷ್ಟ್ರಗೀತೆಯ ಸೃಷ್ಟಿಕರ್ತನಿಗೆ ಶತ ಶತ ನಮನ' ಮಾಡಿದ ಬಾಲಿವುಡ್​ ಬಿಗ್​ ಬಿ..

ಟ್ಯಾಗೋರ್ ಭಾರತದ ರಾಷ್ಟ್ರಗೀತೆ- ಜನ ಗಣ ಮನ ಸೇರಿ ಹಲವಾರು ಪ್ರಸಿದ್ಧ ಕವನಗಳು, ಹಾಡುಗಳು ಮತ್ತು ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ.

By

Published : May 7, 2020, 8:37 PM IST

Amitabh Bachchan
ರವೀಂದ್ರನಾಥ ಟ್ಯಾಗೋರ್

ನವದೆಹಲಿ : ಭಾರತೀಯ ಕವಿ ಮತ್ತು ತತ್ವಜ್ಞಾನಿ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಂದು ಬಾಲಿವುಡ್​ ಬಿಗ್​ಬಿ ಅಮಿತಾಬ್ ಬಚ್ಚನ್ ಗೌರವ ಸಲ್ಲಿಸಿದ್ದಾರೆ.

"ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರಿಗೆ ಜನ್ಮ ದಿನದ ಶುಭಾಶಯಗಳು" ಎಂದು ಅವರ ಚಿತ್ರವನ್ನು ಪೋಸ್ಟ್​ ಮಾಡಿ ತಮ್ಮ ಟ್ಟಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಕವಿ, ಬರಹಗಾರ, ದಾರ್ಶನಿಕ, ಶಿಕ್ಷಣ ಸಂಸ್ಥೆಗಳ ಸೃಷ್ಟಿಕರ್ತ, ಶ್ರೇಷ್ಠ ರಾಷ್ಟ್ರಗೀತೆಯ ಬರಹಗಾರ ನಿಮಗೆ ನನ್ನ ಶತ ಶತ ನಮನ (ನನ್ನ ಗೌರವ) ಎಂದು ಬರೆದುಕೊಂಡಿದ್ದಾರೆ.

ಮೇ7, 1861ರಂದು ಕಲ್ಕತಾದಲ್ಲಿ (ಇಂದಿನ ಕೋಲ್ಕತಾ) ಜನಿಸಿದ ರವೀಂದ್ರನಾಥ ಟ್ಯಾಗೋರ್ ಅವರು ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ. ಅವರು ತಮ್ಮ ಸಾಹಿತ್ಯಿಕ ಕಾರ್ಯಕ್ಕಾಗಿ 1913ರಲ್ಲಿ ಈ ಬಹುಮಾನ ಪಡೆದರು. ಟ್ಯಾಗೋರ್ ಭಾರತದ ರಾಷ್ಟ್ರಗೀತೆ- ಜನ ಗಣ ಮನ ಸೇರಿ ಹಲವಾರು ಪ್ರಸಿದ್ಧ ಕವನಗಳು, ಹಾಡುಗಳು ಮತ್ತು ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ.

ABOUT THE AUTHOR

...view details