‘ಕುರುಕ್ಷೇತ್ರ‘ ಚಿತ್ರದ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ನಿರೂಪಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯಕ್ಕೆ ಒಡೆಯ ಹಾಗೂ ರಾಬರ್ಟ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಒಡೆಯ ಚಿತ್ರವನ್ನು ಎಂ.ಡಿ.ಶ್ರೀಧರ್ ಹಾಗೂ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ.
ದರ್ಶನ್ ಅಭಿನಯದ 'ರಾಬರ್ಟ್', 'ಒಡೆಯ' ಚಿತ್ರಕ್ಕೆ ಹರಿಕೃಷ್ಣ, ಅರ್ಜುನ್ ಜನ್ಯ ಸಾಥ್
ನಟ ದರ್ಶನ್ ಅವರ ಬಹುತೇಕ ಸಿನಿಮಾ ಹಾಡುಗಳಿಗೆ ಸಂಗೀತ ನೀಡಿರುವ ವಿ.ಹರಿಕೃಷ್ಣ ಇದೀಗ ರಾಬರ್ಟ್, ಒಡೆಯ ಚಿತ್ರಗಳ ಹಿನ್ನೆಲೆ ಸಂಗೀತ ಜೋಡಣೆ ಮಾಡುತ್ತಿದ್ದಾರೆ. ಅವರೊಂದಿಗೆ ಅರ್ಜುನ್ ಜನ್ಯ ಎರಡೂ ಸಿನಿಮಾಗಳ ಹಾಡಿಗೆ ಸಂಗೀತ ನೀಡುತ್ತಿದ್ದಾರೆ.
ಇದೀಗ ಒಡೆಯ, ರಾಬರ್ಟ್ ಚಿತ್ರತಂಡದೊಂದಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ 100 ಸಿನಿಮಾಗಳಿಗೆ ಸಂಗೀತ ನೀಡಿರುವ ಅರ್ಜುನ್ ಜನ್ಯ ಸೇರಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದರೆ, ಹಿನ್ನೆಲೆ ಸಂಗೀತ ಜೋಡಣೆ ಜವಾಬ್ದಾರಿಯನ್ನು ವಿ.ಹರಿಕೃಷ್ಣ ಮಾಡುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶಕ ಮಾತ್ರವಲ್ಲದೆ ಪಿ.ಕುಮಾರ್ ಜೊತೆ ಸೇರಿ ಯಜಮಾನ ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರಕ್ಕೆ ಕೂಡಾ ಹರಿಕೃಷ್ಣ ಅವರೇ ಸಂಗೀತ ಸಂಯೋಜಿಸಿದ್ದರು. ದರ್ಶನ್ ಅವರ ಅನೇಕ ಸಿನಿಮಾಗಳಿಗೆ ವಿ.ಹರಿಕೃಷ್ಣ ಸಂಗೀತ ನೀಡಿರುವುದು ವಿಶೇಷ. ಅರ್ಜುನ ಜನ್ಯ ದರ್ಶನ್ ಅಭಿನಯದ ‘ಚೌಕ, ಚಕ್ರವರ್ತಿ ಹಾಗೂ ತಾರಕ್’ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಒಡೆಯ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದರೆ ರಾಬರ್ಟ್ ಚಿತ್ರಕ್ಕೆ ಉಮಾಪತಿ ಹಣ ಹೂಡಿದ್ದಾರೆ.