ಚೆನ್ನೈ (ತಮಿಳುನಾಡು): ಖ್ಯಾತ ತಮಿಳು ನಿರ್ದೇಶಕ, ಛಾಯಾಗ್ರಾಹಕ ಕೆ.ವಿ.ಆನಂದ್ (54) ಹೃದಯಾಘಾತದಿಂದಾಗಿ ಇಂದು ಬೆಳಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಆನಂದ್ ಅವರು 1994ರಲ್ಲಿ 'ಥೆನ್ಮಾವಿನ್ ಕೊಂಬತ್' ಎಂಬ ಮಲಯಾಳಂ ಚಿತ್ರಕ್ಕೆ ಛಾಯಾಗ್ರಾಹಕರಾಗಿ ತಮ್ಮ ಸಿನಿ ಜೀವನ ಪ್ರಾರಂಭಿಸಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು.