ಬಾಲ್ಯದಲ್ಲಿ ನನ್ನ ಮೇಲೆ ರೇಪ್ ಆಗಿತ್ತು ಎಂದು ಅರ್ಜುನ್ ರೆಡ್ಡಿ ಸಿನಿಮಾದ ನಟ ರಾಹುಲ್ ರಾಮಕೃಷ್ಣ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಹೌದು ಈ ಬಗ್ಗೆ ಬರೆದಿರುವ ರಾಹುಲ್, ಬಾಲ್ಯದಲ್ಲಿ ನನ್ನ ಮೇಲೆ ರೇಪ್ ಆಗಿತ್ತು. ಆದ್ರೆ ನನಗಾದ ನೋವಿನ ಬಗ್ಗೆ ನಾನು ಹೇಳಲು ಇಚ್ಚಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ .
ಮತ್ತೊಂದು ಟ್ವೀಟ್ನಲ್ಲಿ ಬರೆದಿರುವ ರಾಹುಲ್, ನಾನು ನನಗೆ ಅನ್ಯಾಯ ಮಾಡಿದವರ ಮಧ್ಯೆಯೇ ಬದುಕುತ್ತಿದ್ದೇನೆ. ನನಗಾದ ಅನ್ಯಾಯಕ್ಕೆ ನ್ಯಾಯವಿಲ್ಲ. ಒಳ್ಳೆಯವರಾಗಿ ಬದುಕಿ ಎಂದಿದ್ದಾರೆ. ಅಲ್ಲದೆ ಪೋಷಕರ ಬಗ್ಗೆ ಮಾತನಾಡಿರುವ ನಟ, ನಿಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ. ಯಾಕಂದ್ರೆ ಮಕ್ಕಳ ನಡವಳಿಕೆಯಲ್ಲಿ ಯಾವಾಗ ಬೇಕಾದರೂ ಬದಲಾವಣೆ ಆಗಬಹುದು ಎಂದಿದ್ದಾರೆ.
ಈ ನಟನ ಮೇಲೆ ಬಾಲ್ಯದಲ್ಲಿಯೇ ರೇಪ್ ಆಗಿತ್ತಂತೆ!
ಇನ್ನು ರಾಹುಲ್ ರಾಮಕೃಷ್ಣ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಗೆಳೆಯ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.