ಕನ್ನಡ ಚಿತ್ರರಂಗದ ಕನಸುಗಾರ ವಿ.ರವಿಚಂದ್ರನ್ ಅವರ ಮಗಳು ಗೀತಾಂಜಲಿ ಮದುವೆ ಸಿದ್ಧತೆಗಳು ಭರದಿಂದ ನಡೀತಿದೆ.ಇದೇ 28 ಹಾಗೂ 29, ಎರಡು ದಿನಗಳ ಕಾಲ ರವಿಮಾಮನ ಮಗಳ ಅದ್ಧೂರಿ ಕಲ್ಯಾಣಕ್ಕೆ ಚಂದನವನ ಸಜ್ಜಾಗಿದೆ.
ಬಹುವರ್ಷಗಳ ನಂತ್ರ ಪ್ರೇಮಲೋಕದ ದೊರೆಯ ಮನೆಯಲ್ಲಿ ಮದುವೆ ಕಾರ್ಯವೊಂದು ನಡೆಯುತ್ತಿದೆ. ವಾಲಗ, ಗಟ್ಟಿಮೇಳದ ಸದ್ದುಗಳ ಕ್ರೇಜಿ ಸ್ಟಾರ್ ಮನೆ ಸಾಕ್ಷಿಯಾಗುತ್ತಿದೆ. ಹೇಳಿ, ಕೇಳಿ ರವಿ ಮಾಮಾನ ಮಗಳ ಮದ್ವೆ ಅಂದ್ರೆ ಕೇಳ್ಬೇಕಾ? ಲಕ್ಷಾಂತರ ಅಭಿಮಾನಿಗಳು, ಗಣ್ಯರು ಈ ವಿವಾಹಕ್ಕೆ ಆಗಮಿಸಿ, ನವಜೋಡಿಗೆ ಆಶೀರ್ವದಿಸಲಿದ್ದಾರೆ. ಹೀಗಾಗಿ ರವಿಚಂದ್ರನ್ ಮಗಳ ಮದುವೆಗೆ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಮತ್ತೊಂದು ವಿಚಾರ ಏನಂದ್ರೆ, ಮದುವೆಗೆ ಆಗಮಿಸುವ ಗಣ್ಯರಿಗೆ, ಅಭಿಮಾನಿಗಳಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ ರವಿಚಂದ್ರನ್. ನೀವೆಲ್ಲರೂ ಪ್ರೀತಿಯಿಂದ ಶುಭ ಹಾರೈಸಲು ಹೂವು ಬೊಕ್ಕೆ ತರ್ತೀರಿ. ಆದರೆ, ಇವು ಸುಮ್ಮನೆ ಬಾಡಿ ಹೋಗಿ ವೇಸ್ಟ್ ಆಗುತ್ತವೆ. ಅದರ ಬದಲು ಹಣದ ವೋಚರ್ಗಳನ್ನ ನೀಡಿದ್ರೆ, ಅವುಗಳನ್ನು ಅನಾಥಾಶ್ರಮಗಳಿಗೆ ಕೊಡಬಹುದು ಎಂದು ತಮ್ಮ ಸದುದ್ದೇಶವನ್ನೂ ಹೊರಹಾಕಿದ್ರು.