ಕರ್ನಾಟಕ

karnataka

ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್.. ಸ್ನೇಹಿತನಿಗಾಗಿ ನೆರವು ಕೋರಿದ ಜಗ್ಗೇಶ್‌!

By

Published : Feb 19, 2020, 5:43 PM IST

ನಿನ್ನೆ ಕಿಲ್ಲರ್ ವೆಂಕಟೇಶ್​ರನ್ನು ಭೇಟಿ ಮಾಡಿರೋ ನಟ ಜಗ್ಗೇಶ್, 'ನನ್ನ ಕೈಲಾದ ಸಹಾಯ ಮಾಡಿ ಇವನ ಉಳಿಸಿಕೊಳ್ಳಲು ಯತ್ನಿಸುತ್ತಿರುವೆ. ಹಿರಿಯ ಕಲಾವಿದನ ಸ್ಥಿತಿ ಕಂಡು ತುಂಬಾ ದುಃಖವಾಯಿತು. ರಾಯರೇ ಕಾಪಾಡಬೇಕು ಇಂಥ ಕಲಾವಿದರನ್ನ' ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

Actor Killer Venkatesh suffering from illness
ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್

ಕಿಲ್ಲರ್ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ನಟನಾಗಿ ಮಿಂಚಿದವರು. ಪೋಷಕ ಪಾತ್ರ, ಖಳ ನಟ, ಸ್ನೇಹಿತನ ಪಾತ್ರ ಹೀಗೆ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಅನಾರೋಗ್ಯಕ್ಕೀಡಾಗಿದ್ದಾರೆ. ವೆಂಕಟೇಶ್‌ ಕುಟುಂಬ ಸಹ ಅವರನ್ನ ಬದುಕಿಸಿಕೊಳ್ಳಲು ಹರಸಾಹಸ ಪಡುತ್ತಿದೆ.

ಕಿಲ್ಲರ್ ವೆಂಕಟೇಶ್​ ಭೇಟಿ ಮಾಡಿದ ಜಗ್ಗೇಶ್​

ಬಹುಪಾಲು ಜಗ್ಗೇಶ್ ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ನಟಿಸುತ್ತಿದ್ದ ನಟ ಕಿಲ್ಲರ್ ವೆಂಕಟೇಶ್ ಲೀವರ್ ವೈಫಲ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ನವರಸ ನಾಯಕ ಜಗ್ಗೇಶ್​, ವೆಂಕಟೇಶ್​ರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿದ್ದಾರೆ. 'ನನ್ನ ಕೈಲಾದ ಸಹಾಯ ಮಾಡಿ ಇವನ ಉಳಿಸಿಕೊಳ್ಳಲು ಯತ್ನಿಸುತ್ತಿರುವೆ. ಹಿರಿಯ ಕಲಾವಿದನ ಸ್ಥಿತಿ ಕಂಡು ತುಂಬಾ ದುಃಖವಾಯಿತು. ರಾಯರೇ ಕಾಪಾಡಬೇಕು ಇಂಥ ಕಲಾವಿದರನ್ನ' ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಕಿಲ್ಲರ್‌ ವೆಂಕಟೇಶ್​ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರವು ನೀಡಬೇಕೆಂದು ಆರೋಗ್ಯ ಸಚಿವ ಶ್ರೀರಾಮುಲು, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರನ್ನು ನಟ ಜಗ್ಗೇಶ್‌ ಮನವಿ ಮಾಡಿದ್ದಾರೆ.

ABOUT THE AUTHOR

...view details