ಪ್ರಪಂಚದಲ್ಲಿ ಅದೆಷ್ಟೋ ಸುಂದರವಾದ ಸ್ಥಳಗಳಿದ್ದರೂ ಶೂಟಿಂಗ್ ಸೆಟ್ಗಿಂತ ಹಿತವಾದ ಹಾಗೂ ಕಂಫರ್ಟಬಲ್ ಆದ ಸ್ಥಳ ಮತ್ತೊಂದಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ. 7 ತಿಂಗಳ ನಂತರ ಕಂಗನಾ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.
ಪ್ರಪಂಚದ ಅತ್ಯದ್ಭುತ ಪ್ರದೇಶಗಳಿಗಿಂತ ಕಂಗನಾಗೆ ಈ ಸ್ಥಳವೇ ಬಹಳ ಇಷ್ಟವಂತೆ
7 ತಿಂಗಳ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿರುವ ಕಂಗನಾ ರಣಾವತ್, ಪ್ರಪಂಚದ ಎಷ್ಟೋ ಅದ್ಭುತ ಪ್ರದೇಶಗಳಿಗಿಂತ ನನಗೆ ಚಿತ್ರೀಕರಣದ ಸೆಟ್ ಬಹಳ ಖುಷಿ ಕೊಡುತ್ತದೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಕಂಗನಾ 'ತಲೈವಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ನಂತರ ಸ್ವಜನಪಕ್ಷಪಾತದ ವಿಚಾರವಾಗಿ ಹಾಗೂ ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಹೋಲಿಸಿ ವಿವಾದಕ್ಕೆ ಒಳಗಾಗಿದ್ದ ಕಂಗನಾ 'ತಲೈವಿ' ಶೂಟಿಂಗ್ ಸೆಟ್ನ ಕೆಲವೊಂದು ಫೋಟೋಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಷೇರ್ ಮಾಡಿಕೊಂಡಿದ್ದಾರೆ. "ಇದು ನಿನ್ನೆ ಬೆಳಗಿನ ಜಾವ ತಲೈವಿ ಚಿತ್ರದ ದೃಶ್ಯಕ್ಕಾಗಿ ಪ್ರತಿಭಾವಂತ ನಿರ್ದೇಶಕ ಎ.ಎಲ್. ವಿಜಯ್ ಅವರೊಂದಿಗೆ ಚರ್ಚೆ ಮಾಡುತ್ತಿರುವಾಗ ಕ್ಲಿಕ್ ಮಾಡಿದ ಫೋಟೋಗಳು. ಪ್ರಪಂಚದಲ್ಲಿ ಎಷ್ಟೋ ಅದ್ಭುತವಾದ ಸ್ಥಳಗಳಿವೆ. ಆದರೆ ಶೂಟಿಂಗ್ ಸೆಟ್ನಷ್ಟು ಖುಷಿ ಕೊಡುವ ಸ್ಥಳ ಬೇರೆ ಇಲ್ಲ" ಎಂದು ಕಂಗನಾ ಬರೆದುಕೊಂಡಿದ್ದಾರೆ.
ತಲೈವಿ ಚಿತ್ರದಲ್ಲಿ ಕಂಗನಾ ರಣಾವತ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. "7 ತಿಂಗಳ ಬಳಿಕ ಮತ್ತೆ ಶೂಟಿಂಗ್ಗೆ ಹಾಜರಾಗಲು ದಕ್ಷಿಣ ಭಾರತದತ್ತ ಪ್ರಯಾಣಿಸುತ್ತಿದ್ದೇನೆ" ಎಂದು ಕಂಗನಾ ರಣಾವತ್ ಕಳೆದ ವಾರ ಪೋಸ್ಟ್ ಹಂಚಿಕೊಂಡಿದ್ದರು. ಬಾಹುಬಲಿ ಹಾಗೂ ಮಣಿಕರ್ಣಿಕ ಚಿತ್ರಗಳಿಗೆ ಕಥೆ ಬರೆದ ಕೆ.ವಿ. ವಿಜಯೇಂದ್ರ ಪ್ರಸಾದ್ ಹಾಗೂ ಡರ್ಟಿ ಪಿಕ್ಚರ್ಗೆ ಕಥೆ ಬರೆದ ರತಜ್ ಅರೋರ ಜೊತೆ ಸೇರಿ ತಲೈವಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. 26 ಜೂನ್ 2020 ರಂದು ತಲೈವಿ ಬಿಡುಗಡೆಯಾಗಲು ದಿನಾಂಕ ನಿಗದಿಗೊಳಿಸಲಾಗಿದೆ.