ಕರ್ನಾಟಕ

karnataka

By

Published : Sep 3, 2020, 1:26 PM IST

ETV Bharat / jagte-raho

ತೆಲಂಗಾಣ: ಎನ್​​ಕೌಂಟರ್​​​ನಲ್ಲಿ ಓರ್ವ ನಕ್ಸಲ್​ ಹತ

ತೆಲಂಗಾಣದ ಭದ್ರಾದ್ರಿ ಕೊತ್ತಗುಡಂ ಜಿಲ್ಲೆಯ ದೇವಲ್ಲಗುಡಂ ಅರಣ್ಯ ಪ್ರದೇಶದಲ್ಲಿ ಓರ್ವ ನಕ್ಸಲ್​ನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

Bhadradri Kottagudem
ನಕ್ಸಲ್​ ಹತ್ಯೆ

ತೆಲಂಗಾಣ: ಇಲ್ಲಿನ ಭದ್ರಾದ್ರಿ ಕೊತ್ತಗುಡಂ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್​ಕೌಂಟರ್​ನಲ್ಲಿ ಓರ್ವ ನಕ್ಸಲ್​​ನನ್ನು​​ ಹತ್ಯೆ ಮಾಡಲಾಗಿದೆ.

ಇಲ್ಲಿನ ದೇವಲ್ಲಗುಡಂ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆ ವೇಳೆ 25 ವರ್ಷದ ಓರ್ವ ನಕ್ಸಲ್​ನನ್ನು ಹೊಡೆದುರುಳಿಸಲಾಗಿದ್ದು, ಬಳಿಕ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್​ ತಂಡವನ್ನು ಕಳುಹಿಸಲಾಗಿದೆ ಎಂದು ಭದ್ರಾದ್ರಿ ಕೊತ್ತಗುಡಂ ಪೊಲೀಸ್​ ವರಿಷ್ಠಾಧಿಕಾರಿ ಸುನಿಲ್​ ದತ್​​ ಮಾಹಿತಿ ನೀಡಿದ್ದಾರೆ.

ಇನ್ನು ಮೃತ ನಕ್ಸಲ್​ ಬಳಿ ಇದ್ದ ಶಸ್ತ್ರಾಸ್ತ್ರ ಹಾಗೂ ಬೈಕ್​ ವಶಪಡಿಸಿಕೊಂಡಿರುವ ಪೊಲೀಸರು, ಕೂಂಬಿಂಗ್​ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ABOUT THE AUTHOR

...view details