ಕರ್ನಾಟಕ

karnataka

ETV Bharat / jagte-raho

ಗಾಂಜಾ ಮಾರಾಟ: ಹುಬ್ಬಳ್ಳಿಯಲ್ಲಿ ಐವರ ಬಂಧನ

ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

By

Published : Sep 17, 2020, 12:00 PM IST

Arrest
Arrest

ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಪರಶುರಾಮ ಬೊಳನ್ನವರ (24), ಬಸಯ್ಯ ಪೂಜಾರ (19), ಗಣೇಶ ಕಾಕಡೆ(24), ಭೀಮ ಜಾಡರ(21), ಶಿವಾನಂದ ಕಾಳೆ (24) ಬಂಧಿತರು. ಬಂಧಿತರಿಂದ 9,500 ರೂ. ಮೌಲ್ಯದ 190 ಗ್ರಾಂ ಗಾಂಜಾ, ಒಂದು ಬೈಕ್, ಐದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.‌

ಆರೋಪಿಗಳು ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಅಶೋಕ ನಗರ ಠಾಣೆ ಪೊಲೀಸರು ದಾಳಿ‌ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details