ಕರ್ನಾಟಕ

karnataka

ಜನಸಮೂಹದ ಮೇಲೆ ಹರಿದ ಬಸ್​: ಮೂವರ ದುರ್ಮರಣ

ದೆಹಲಿಯ ನಂದ್ ನಗರಿಯ ಫ್ಲೈಓವರ್‌ನಲ್ಲಿ ಗುರುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

By

Published : Sep 25, 2020, 4:34 PM IST

Published : Sep 25, 2020, 4:34 PM IST

bus runs over crowd in Delhi
ಭೀಕರ ರಸ್ತೆ ಅಪಘಾತ

ನವದೆಹಲಿ:ನಿಯಂತ್ರಣ ಕಳೆದುಕೊಂಡ ಬಸ್​ವೊಂದು ಬೀದಿಬದಿ ಅಂಗಡಿಗಳಿಗೆ ನುಗ್ಗಿದ ಪರಿಣಾಮ 12 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ ನಂದ್ ನಗರಿಯಲ್ಲಿ ನಡೆದಿದೆ.

ದೆಹಲಿಯ ನಂದ್ ನಗರಿಯ ಫ್ಲೈಓವರ್‌ನಲ್ಲಿ ಭೀಕರ ರಸ್ತೆ ಅಪಘಾತ

ಗುರುವಾರ ರಾತ್ರಿ ನಂದ್ ನಗರಿಯ ಫ್ಲೈಓವರ್‌ನಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಜಮಾಯಿಸಿದ ಉದ್ರಿಕ್ತ ಸಾರ್ವಜನಿಕರು, ಬಸ್​ಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲು ಯತ್ನಿಸಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಸ್‌ ಚಾಲಕನನ್ನು ಬಂಧಿಸಲಾಗಿದೆ ಎಂದು ಈಶಾನ್ಯ ದೆಹಲಿ ಡಿಸಿಪಿ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.

ABOUT THE AUTHOR

...view details