ಕರ್ನಾಟಕ

karnataka

ETV Bharat / international

ಪಾಕ್​ ತಗಾದೆ ಮಧ್ಯೆ ಚೆನಾಬ್​​​​​ ನದಿಯಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸಲು ಭಾರತ ನಿರ್ಧಾರ

ಚೆನಾಬ್​ ನದಿಯಲ್ಲಿ 850 ಮೆಗಾವ್ಯಾಟ್ ರ್ಯಾಟಲ್ ಜಲ ವಿದ್ಯುತ್ ಸ್ಥಾವರ ನಿರ್ಮಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಇಸ್ಲಾಮಾಬಾದ್​ನ ಪ್ರಯತ್ನಗಳು ಭಾರತದ ಯೋಜನೆಗೆ ಅಡ್ಡಿಯಾಗಲ್ಲ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ..

By

Published : Jan 25, 2021, 3:50 PM IST

objections
ನಿರ್ಧಾರ

ಇಸ್ಲಾಮಾಬಾದ್ : ಜಮ್ಮು-ಕಾಶ್ಮೀರದ ಚೆನಾಬ್​ ನದಿಯಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸಲು ಭಾರತ ಮುಂದಾದಾಗೆಲ್ಲ ಪಾಕಿಸ್ತಾನ ಪದೇಪದೆ ಆಕ್ಷೇಪ ವ್ಯಕ್ತಪಡಿಸುತ್ತಿತ್ತು. ಈ ಮಧ್ಯೆ, ಯೋಜನೆಯ ನಿರ್ಮಾಣ ಕಾರ್ಯ ಮುಂದುವರಿಸಿಲು ಭಾರತ ನಿರ್ಧರಿಸಿದೆ.

ಈ ಹಿಂದೆ ಸಿಂಧೂ, ಝೆಲಂ, ಚೆನಾಬ್​ ನದಿಗಳು ನಮಗೆ ಸೇರಿದ್ದು ಎಂದು ಪಾಕ್ ಪ್ರತಿಪಾದಿಸಿತ್ತು. 1960ರಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಆದ ಜಲ ಒಪ್ಪಂದದ ಪ್ರಕಾರ ರವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ನಮಗೆ ಸೇರಿವೆ ಎಂದು ಭಾರತ ವಾದಿಸಿದೆ.

ಪಾಕ್​ನಲ್ಲಿ ನೀರಿನ ಕೊರತೆ ಸೃಷ್ಟಿಸಲು ಹಾಗೂ ಪ್ರವಾಹ ಭೀತಿ ಉಂಟು ಮಾಡಲು ಭಾರತ ಜಲಾಶಯಗಳನ್ನು ನಿರ್ಮಿಸುತ್ತಿದೆ ಎಂದು ಪಾಕ್​​ ಆರೋಪಿಸಿದೆ. ಭಾರತದ ಈ ನಡೆಗೆ ಪಾಕ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ದೆಹಲಿ ಸರ್ಕಾರ ನಮಗೆ ನೀರು ಬಾರದಿರುವಂತೆ ನೋಡಿಕೊಳ್ಳಲು ಈ ಯೋಜನೆ ಕೈಗೊಂಡಿದ್ದಾರೆ ಎಂದು ದೂರಿದ್ದಾರೆ.

ಚೆನಾಬ್​ ನದಿಯಲ್ಲಿ 850 ಮೆಗಾವ್ಯಾಟ್ ರ್ಯಾಟಲ್ ಜಲ ವಿದ್ಯುತ್ ಸ್ಥಾವರ ನಿರ್ಮಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಇಸ್ಲಾಮಾಬಾದ್​ನ ಪ್ರಯತ್ನಗಳು ಭಾರತದ ಯೋಜನೆಗೆ ಅಡ್ಡಿಯಾಗಲ್ಲ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

2012ರಲ್ಲಿ ಪಾಕ್​ದುಲ್​​​​ ಯೋಜನೆ ಪರಿಶೀಲಿಸಿದ ಪಾಕ್ ನಿಯೋಗ ಭಾರತ ಸಿಂಧ್​ ತಾಸ್​ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಜತೆಗೆ ಯೋಜನೆಯ ಫ್ರೀ ಬೋರ್ಡ್ ಎತ್ತರವನ್ನು ಏಳು ಅಡಿಗಳಿಂದ 2 ಅಡಿಗೆ ಇಳಿಸಬೇಕು, ಹೆಚ್ಚುವರಿಯಾಗಿ 40 ಮೀಟರ್​ ಸೀಲ್​ವೇ ಗೇಟ್​​ಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿತ್ತು.

ABOUT THE AUTHOR

...view details