ಕರ್ನಾಟಕ

karnataka

By

Published : Dec 5, 2020, 2:32 PM IST

ETV Bharat / international

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅವಘಡ: ವಿಷಕಾರಿ ಅನಿಲ ಸೇವಿಸಿ 18 ಮಂದಿ ಬಲಿ

ಎರಡು ತಿಂಗಳಿಂದ ಬಂದ್​​ ಆಗಿದ್ದ ಚೀನಾದ ಕಲ್ಲಿದ್ದಲು ಗಣಿಯಲ್ಲಿ ವಿಷಪೂರಿತ ಅನಿಲ ಸೇವಿಸಿ 18 ಕಾರ್ಮಿಕರು ಮೃತಪಟ್ಟಿದ್ದಾರೆ. ಒಬ್ಬರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

18 dead, 1 rescued in China mine accident
ಕಲ್ಲಿದ್ದಲು ಗಣಿ

ಬೀಜಿಂಗ್​: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಪ್ರಮಾಣದ ಕಾರ್ಬನ್ ಮಾನಾಕ್ಸೈಡ್ ಬಿಡುಗಡೆಯಾಗಿ 18 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಚೀನಾದಲ್ಲಿ ನಡೆದಿದೆ.

ಎರಡು ತಿಂಗಳಿಂದ ಬಂದ್​​ ಆಗಿದ್ದ ಚೀನಾದ ಯೋಂಗ್ಚುವಾನ್ ಜಿಲ್ಲೆಯ ಡಯಾಶುಯಿಡಾಂಗ್ ಕಲ್ಲಿದ್ದಲು ಗಣಿಯಲ್ಲಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ.

ಭೂಮಾಳಿಗೆ ಒಳಗೆ 24 ಕಾರ್ಮಿಕರು ಉಪಕರಣಗಳನ್ನು ಕಿತ್ತುಹಾಕುವ ಕೆಲಸದಲ್ಲಿ ತೊಡಗಿದ್ದರು. ವಿಷಕಾರಿ ಅನಿಲ ಸೇವಿಸಿ 18 ಮಂದಿ ಮೃತಪಟ್ಟಿದ್ದರೆ. ಒಬ್ಬರನ್ನು ರಕ್ಷಿಸಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ, ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ABOUT THE AUTHOR

...view details