ಮುಂಬೈ:ಪಿಕ್ನಿಕ್ ಮುಗಿಸಿ ಮರಳುತ್ತಿದ್ದ ಶಾಲಾ ಬಸ್ವೊಂದು ಅಪಘಾತಕ್ಕೀಡಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿನ ಲೊಮವಲಾಗೆ ಪಿಕ್ನಿಕ್ಗೆ ತೆರಳಿದ್ದ ವಿದ್ಯಾರ್ಥಿಗಳಿದ್ದ ಬಸ್ ಖೋಪೊಲಿ ಹಿಲ್ ಸ್ಟೇಷನ್ನಲ್ಲಿ ಅಪಘಾತಕ್ಕೆ ಒಳಗಾಗಿದೆ.
ಬ್ರೇಕ್ ಫೇಲ್ ಆಗಿದ್ದರಿಂದ ಬಸ್ ನಿಯಂತ್ರಣಕ್ಕೆ ಸಿಗಲಿಲ್ಲ ಎಂದು ಡ್ರೈವರ್ ತಿಳಿಸಿದ್ದಾರೆ. ಹಳೆ ಮುಂಬೈ- ಪುಣೆ ಹೆದ್ಧಾರಿ ಬಳಿ ರಾತ್ರಿ 8ಗಂಟೆಗೆ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಬುರ್ಬನ್ ಚೆಂಬುರ್ ಕೋಚಿಂಗ್ ಕ್ಲಾಸಿನ 10ನೇ ತರಗತಿಯ 49 ವಿದ್ಯಾರ್ಥಿಗಳು ಖಾಸಗಿ ಬಸ್ನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಘಾಟ್ನಲ್ಲಿ ಇಳಿಯುವಾಗ ಬಸ್ ನಿಯಂತ್ರಣ ತಪ್ಪಿದೆ. ರಾಜೇಶ್ ಮಾತ್ರೆ (16) ಮತ್ತು ಹಿತಿಕ ಖನ್ನಾ (17) ಎಂಬ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಡ್ರೈವರ್ ಸೇರಿದಂತೆ ಗಾಯಗೊಂಡ ಬಸ್ನ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಕುರಿತು ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರೋಪ್ ವೇ ಮೂಲಕ ವೇದಿಕೆಗೆ ವಧುವಿನ ಆಗಮನ: ಶೋಕವಾಗದಿರಲಿ ಶೋಕಿ ಎಂದು ನೆಟ್ಟಿಗರ ನೆಗೆಟಿವ್ ಕಮೆಂಟ್