ಕರ್ನಾಟಕ

karnataka

ಬೆಂಕಿ ಇದ್ದಾಗಲೇ ಹೊಗೆ ಬರೋದು... ರಾಗಿಣಿಯನ್ನು ಬಂಧಿಸಿ: ಪ್ರಮೋದ್ ಮುತಾಲಿಕ್ ಆಗ್ರಹ

ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ, ಅವಳ ಹಿಂದೆ ದೊಡ್ಡ ದೊಡ್ಡ ಕಿಂಗ್ ಪಿನ್​ಗಳಿದ್ದಾರೆ. ಚಿತ್ರನಟಿ ರಾಗಿಣಿಯನ್ನ ಬಂಧಿಸಬೇಕು. ಬೆಂಕಿ ಇದ್ದಾಗಲೇ ಹೊಗೆ ಬರೋದು, ನಿಮ್ಮತ್ರ ದಾಖಲೆಗಳಿರೋದಕ್ಕೆ ನೀವು ಒಳಗಡೆ ನುಗ್ಗಿರೋದು. ಹೋಗಿ ನಟಿಯನ್ನು ಅರೆಸ್ಟ್ ಮಾಡಿ, ಆಕೆಗೆ ಭಯವೇ ಇಲ್ಲದಂತಾಗಿದೆ ಎಂದ್ರು.

By

Published : Sep 4, 2020, 4:00 PM IST

Published : Sep 4, 2020, 4:00 PM IST

ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್

ತುಮಕೂರು: ನಟಿ ರಾಗಿಣಿಯನ್ನ ಬಂಧಿಸಬೇಕು. ಇದು ಡ್ರಗ್ ಜಿಹಾದ್ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಅತಿ ಹೆಚ್ಚಾಗಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಶಾಸಕ ಹ್ಯಾರೀಸ್ ಕ್ಷೇತ್ರದ ಎಲ್ಲಾ ಕ್ರಿಶ್ಚಿಯನ್ ಕಾಲೇಜು, ಹೈಸ್ಕೂಲುಗಳ ವಿದ್ಯಾರ್ಥಿಗಳ ಬ್ಯಾಗ್​​ನಲ್ಲಿ ಗಾಂಜಾ ಸಿಗುತ್ತೆ, ಕೋಕೈನ್ ಸಿಗುತ್ತೆ, ಡ್ರಗ್ಸ್ ಚಾಕ್ಲೆಟ್ ಸಿಗುತ್ವೆ ಎಂದು ದೂರಿದ್ದಾರೆ.

ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ, ಅವಳ ಹಿಂದೆ ದೊಡ್ಡ ದೊಡ್ಡ ಕಿಂಗ್ ಪಿನ್​ಗಳಿದ್ದಾರೆ. ಚಿತ್ರನಟಿ ರಾಗಿಣಿಯನ್ನ ಬಂಧಿಸಬೇಕು. ಬೆಂಕಿ ಇದ್ದಾಗಲೇ ಹೊಗೆ ಬರೋದು, ನಿಮ್ಮತ್ರ ದಾಖಲೆಗಳಿರೋದಕ್ಕೆ ನೀವು ಒಳಗಡೆ ನುಗ್ಗಿರೋದು. ಹೋಗಿ ನಟಿಯನ್ನು ಅರೆಸ್ಟ್ ಮಾಡಿ, ಆಕೆಗೆ ಭಯವೇ ಇಲ್ಲದಂತಾಗಿದೆ ಎಂದ್ರು.

ಪ್ರಮೋದ್ ಮುತಾಲಿಕ್
ರಾಜಕಾರಣಿಗಳಿಗೆ ದುಡ್ಡು ಕೊಟ್ರೆ ಎಲ್ಲಾ ಸರಿ ಹೋಗುತ್ತೆ ಎಂಬ ಭಾವನೆ ಇದೆ. ಸಂಜನಾ, ರಾಗಿಣಿ ಇವರು ನಟಿಯರಾ? ಇವರತ್ರ ನಟನೆ ಇದ್ಯಾ..? ಇವರೆಲ್ಲಾ ಮಜಾ ಮಾಡೋಕ್ಕೆ ಗಾಂಧಿನಗರಕ್ಕೆ ಬಂದಿರೋದು. ಚಿತ್ರ ರಂಗವನ್ನು ಹಾಳು ಮಾಡೋಕೆ ಬಂದಿರೋದು. ಇವರನ್ನು ಒಳಗಾಕ್ಬೇಕು. ಇವರಿಗೆ ಭಯ ಬರಬೇಕು ಎಂದು ಆಗ್ರಹಿಸಿದರು.ಪೊಲೀಸರಿಗೆ ಡ್ರಗ್ ದಂಧೆ ಬಗ್ಗೆ ಇಂಚಿಂಚೂ ಮಾಹಿತಿ ಇರುತ್ತೆ. ಆದ್ರೆ ಪೊಲೀಸರ ಕೈಯನ್ನೂ ರಾಜಕಾರಣಿಗಳು ಕಟ್ಟಿಹಾಕಿದ್ದಾರೆ ಎಂದು ದೂರಿದರು.

ABOUT THE AUTHOR

...view details