ಕರ್ನಾಟಕ

karnataka

ನಾವು ಪೊಲೀಸರು ಅಂತಾ ನಂಬಿಸಿ ದಂಪತಿಯನ್ನ ಯಾಮಾರಿಸಿದ ಖದೀಮರು!

By

Published : Dec 2, 2019, 10:13 PM IST

ಪೊಲೀಸರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

Shivamogga crime news
ಚಿನ್ನಾಭರಣ ಕದ್ದರು

ಶಿವಮೊಗ್ಗ:ಪೊಲೀಸರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗದ ಹರಕೆರೆ ಬಳಿ ನಡೆದಿದೆ.

ಶಿವಮೊಗ್ಗದಿಂದ ಗಾಜನೂರು ರಸ್ತೆಯ ಹರಕರೆಯ ನಾರಾಯಣ ಹೃದಯಾಲಯದ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್​​​ ಅಡ್ಡಗಟ್ಟಿದ ಇಬ್ಬರು, ನಾವು ಪೊಲೀಸರು, ಇಂದು ಎರಡು ಕಡೆ ಬಂಗಾರದ ಸರ ಅಪಹರಣ ಪ್ರಕರಣಗಳು ನಡೆದಿವೆ. ನೀವು ಹೀಗೆಲ್ಲ ಒಡವೆ ಹಾಕಿಕೊಂಡು ಹೋಗಬೇಡಿ ಎಂದು ಹೇಳಿದ್ದಾರೆ. ದಂಪತಿ ಮೈ ಮೇಲೆ ಇದ್ದ ಒಡವೆಗಳನ್ನು ಬಿಚ್ಚಿಕೊಂಡು ಹೋಗುವಂತೆ ತಿಳಿಸಿದ್ದಾರೆ.

ತುಂಗಾನಗರ ಪೊಲೀಸ್​ ಠಾಣೆ

ಪೊಲೀಸರೇ ಹೇಳಿದ್ದಾರೆ ಎಂದುಕೊಂಡು ದಂಪತಿ ನಂಬಿದ್ದಾರೆ. ತಕ್ಷಣ ಮಹಿಳೆ ತನ್ನ 60 ಗ್ರಾಂ ಮಾಂಗಲ್ಯ‌ಸರ, ಉಂಗುರ, ಪತಿ ಬಳಿ ಇದ್ದ ಉಂಗುರ ಹಾಗೂ ಕೊರಳಿನ ಚೈನ್​​ಅನ್ನು ತಮ್ಮ ಕರ್ಚಿಪ್​​​​ನಲ್ಲಿ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಈ ವೇಳೆ ಖದೀಮರು ನಮಗೆ ಕೊಡಿ, ಇನ್ನೂ ಚೆನ್ನಾಗಿ‌ ಕಟ್ಟಿ ಕೊಡುತ್ತೇವೆ ಎಂದು ದಂಪತಿಯಿಂದ ಕರ್ಚಿಪ್​​ ಪಡೆದುಕೊಂಡಿದ್ದಾರೆ. ದಂಪತಿ ಮಾತನಾಡಿಸುವಷ್ಟರಲ್ಲಿ ಕರ್ಚಿಪ್​​ ಅದಲು-ಬದಲು ಮಾಡಿ ದಂಪತಿಗೆ ಕೊಟ್ಟು ಪರಾರಿಯಾಗಿದ್ದಾರೆ.

ಸ್ವಲ್ಪ ದೂರ ಹೋಗಿ ದಂಪತಿ ಕರ್ಚಿಪ್​​ ನೋಡಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ಈ ಕುರಿತು ದಂಪತಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪಿಎಸ್​​ಐ 'ಈಟಿವಿ ಭಾರತ್​​'ಗೆ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details