ಕರ್ನಾಟಕ

karnataka

370ನೇ ವಿಧಿ ಹಿಂಪಡೆಯದಿದ್ದರೆ ಕಾಶ್ಮೀರಕ್ಕೂ ಅಫ್ಘಾನಿಸ್ತಾನಕ್ಕಾದ ಸ್ಥಿತಿಯೇ ಆಗುತ್ತಿತ್ತೇನೋ.. ಸಂಸದ ರಾಘವೇಂದ್ರ

By

Published : Aug 17, 2021, 7:31 PM IST

ಅಫ್ಘಾನಿಸ್ತಾನದಲ್ಲಿ ಜನ ಜೀವ ಉಳಿಸಿಕೊಳ್ಳಲು ವಿಮಾನದ ರೆಕ್ಕೆ ಮೇಲೆ ಕುಳಿತು ಬೇರೆಡೆಗೆ ತೆರಳಲು ಯತ್ನಿಸುತ್ತಿರುವ ವಿಡಿಯೋವನ್ನು ನಾವೆಲ್ಲ ನೋಡಿದ್ದೇವೆ..

MP Raghavendra
ಸಂಸದ ಬಿವೈ ರಾಘವೇಂದ್ರ

ಶಿವಮೊಗ್ಗ :ಕಾಶ್ಮೀರದ ಆರ್ಟಿಕಲ್ 370 ಹಿಂಪಡೆಯದೇ ಇದ್ದರೆ ಇಂದು ಕಾಶ್ಮೀರಕ್ಕೂ ಅಫ್ಘಾನಿಸ್ತಾನಕ್ಕೆ ಆದ ಸ್ಥಿತಿಯೇ ಆಗುತ್ತಿತ್ತೇನೋ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಸಂಸದ ಬಿ ವೈ ರಾಘವೇಂದ್ರ

ನಗರದ ಶುಭಮಂಗಳ ಸಭಾಂಗಣದಲ್ಲಿ ನಡೆದ ಜನಾರ್ಶಿವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶ್ಮೀರದ ಆರ್ಟಿಕಲ್ 370 ಹಿಂಪಡೆಯಬೇಕು ಎಂಬುದು ನಮ್ಮ ಬಹು ಹಿಂದಿನ ಕನಸಾಗಿತ್ತು. ಅದು ನನಸಾಗಿದ್ದರಿಂದ ಕಾಶ್ಮೀರ ಕ್ಷೇಮವಾಗಿದೆ. ಒಂದು ವೇಳೆ ಆರ್ಟಿಕಲ್​​ 370ಯನ್ನು ಹಿಂಪಡೆಯದಿದ್ದರೆ ಅಪ್ಘಾನಿಸ್ತಾನಕ್ಕೆ ಆದ ಗತಿಯೇ ಕಾಶ್ಮೀರಕ್ಕೂ ಆಗುತ್ತಿತ್ತೇನೋ ಎಂದು ಹೇಳಿದರು.

ಇದನ್ನೂ ಓದಿ:ನಮಗೆ ಭಾರತ ಸರ್ಕಾರ ಸಹಾಯ ಮಾಡಬೇಕು: ಆಫ್ಘನ್ ವಿದ್ಯಾರ್ಥಿಗಳ ಮನವಿ

ಅಫ್ಘಾನಿಸ್ತಾನದಲ್ಲಿ ಜನ ಜೀವ ಉಳಿಸಿಕೊಳ್ಳಲು ವಿಮಾನದ ರೆಕ್ಕೆ ಮೇಲೆ ಕುಳಿತು ಬೇರೆಡೆಗೆ ತೆರಳಲು ಯತ್ನಿಸುತ್ತಿರುವ ವಿಡಿಯೋವನ್ನು ನಾವೆಲ್ಲ ನೋಡಿದ್ದೇವೆ. ಆರ್ಟಿಕಲ್ 370 ಹಿಂಪಡೆಯದಿದ್ದರೆ ಇಂದು ಕಾಶ್ಮೀರದಲ್ಲೂ ಇದೇ ಸ್ಥಿತಿ ನೋಡುವಂತಾಗುತ್ತಿತ್ತು ಎಂದು ಸಂಸದ ರಾಘವೇಂದ್ರ ಹೇಳಿದರು.

ABOUT THE AUTHOR

...view details