ಶಿವಮೊಗ್ಗ: ನನಗೆ ಸಚಿವ ಸ್ಥಾನ ನೀಡಿ ಎಂದು ದೆಹಲಿಗೆ ಹೋಗಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುತ್ತೇನೆ. ಇಲ್ಲವೇ ಈಶ್ವರಪ್ಪ ಹೇಳಿದ ಹಾಗೆ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.
ಬೇರೆ ಬೇರೆ ಕಾರಣಕ್ಕೆ ಹಿರಿಯರನ್ನು ಕೈ ಬಿಟ್ಟರೆ, ನಮ್ಮಂತಹವರಿಗೆ ಸ್ಥಾನ ಸಿಗಬಹುದು. ನನಗೂ ಹಾಗೂ ಆರಗ ಜ್ಞಾನೇಂದ್ರ ಅಂತಹವರಿಗೆ ಅವಕಾಶ ಸಿಗಬಹುದು. ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಯಡಿಯೂರಪ್ಪ ಇಬ್ಬರು ಸ್ಟ್ರಾಂಗ್ ಇದ್ದಾರೆ. ನಮಗೆ ಪರಿವಾರವಿದೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.