ಕರ್ನಾಟಕ

karnataka

ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಗ್ರಾ. ಪಂ ಉಪಾಧ್ಯಕ್ಷ ಮಾಡಿದ್ದೇನು ಗೋತ್ತಾ?

94 (ಸಿ) ಹಕ್ಕು ಪತ್ರವನ್ನು ನೀಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರೊಬ್ಬರು ಅರಣ್ಯ ಇಲಾಖೆ ಕಚೇರಿ ಮೇಲೆ ಹತ್ತಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

By

Published : Dec 4, 2019, 1:01 PM IST

Published : Dec 4, 2019, 1:01 PM IST

ETV Bharat / city

ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಗ್ರಾ. ಪಂ ಉಪಾಧ್ಯಕ್ಷ ಮಾಡಿದ್ದೇನು ಗೋತ್ತಾ?

ಅರಣ್ಯ ಇಲಾಖೆ ಕಚೇರಿ ಮೇಲೆ ಹತ್ತಿ ವಿನೂತನ ಪ್ರತಿಭಟನೆ
ಅರಣ್ಯ ಇಲಾಖೆ ಕಚೇರಿ ಮೇಲೆ ಹತ್ತಿ ವಿನೂತನ ಪ್ರತಿಭಟನೆ

ಶಿವಮೊಗ್ಗ: 94 (ಸಿ) ಹಕ್ಕು ಪತ್ರವನ್ನು ನೀಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರೊಬ್ಬರು ಅರಣ್ಯ ಇಲಾಖೆ ಕಚೇರಿ ಮೇಲೆ ಹತ್ತಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಅರಣ್ಯ ಇಲಾಖೆ ಕಚೇರಿ ಮೇಲೆ ಹತ್ತಿ ವಿನೂತನ ಪ್ರತಿಭಟನೆ

ಹೊಸನಗರ ತಾಲೂಕಿನ ನಗರ ಗ್ರಾಮದ ಅರಣ್ಯ ಇಲಾಖೆಯ ಕಚೇರಿ ಮೇಲೆ ಹತ್ತಿ ನಗರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ರವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 128 ಜನ 94 (ಸಿ) ಗಾಗಿ ಅರ್ಜಿ ಹಾಕಿದ್ದರು. ಈ ಹಿಂದೆ ಕೆಲ ಅರ್ಜಿಗಳನ್ನು ಮಾನ್ಯ ಮಾಡಲಾಗಿತ್ತು. ಆದ್ರೆ ಈಗ ಉಳಿದ 128 ಜನರ‌ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಹೊಸನಗರದ ಡಿಎಫ್​ಓ ಆದೇಶ ಮಾಡಿದ್ದಾರೆ. ಇದರಿಂದ ಅವಶ್ಯಕವಾಗಿರುವ 94 (ಸಿ) ಅರ್ಜಿದಾರರಿಗೆ ಭೂಮಿಯನ್ನು ಮಂಜೂರು ಮಾಡಿ, ಹಕ್ಕು ಪತ್ರವನ್ನು ನೀಡಬೇಕು. ಇಲ್ಲವಾದಲ್ಲಿ ನಾನು ಕಚೇರಿ ಮೇಲಿಂದ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತು ಕೊಂಡಿದ್ದಾರೆ.

ಈ ಕುರಿತು ಕರುಣಾಕರ‌ ಶೆಟ್ಟಿಯನ್ನು ಈ ಟಿವಿ ಭಾರತ ಸಂರ್ಪಕಿಸಿದಾಗ ನಾನು ಜನರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಈಗ ಎಸಿಎಫ್ ರವರು ಡಿಎಫ್​ಒ ರನ್ನು ಕರೆಯಿಸುವುದಾಗಿ ಹೇಳಿದ್ದಾರೆ. ಅವರು ಬಂದು ಹಕ್ಕು ಪತ್ರ ನೀಡುವುದಾಗಿ ಹೇಳಿದ್ರೆ, ನಾನು ಕೆಳಗೆ ಇಳಿಯುತ್ತೇನೆ. ಇಲ್ಲವಾದಲ್ಲಿ‌ ಇಲ್ಲೇ ನನ್ನ ಹೋರಾಟ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details