ಮೈಸೂರು: ಕಳೆದ ಬಾರಿ ಚುನಾವಣೆಯಲ್ಲಿ ನನಗೆ ಸಾಲವಿದೆ ಎಂದು ಹೇಳುತ್ತಿದ್ದವರು. ಉಪಚುನಾವಣೆಯಲ್ಲಿ ಸಾಲ ಇಲ್ಲವೆಂದು ಅಫಿಡಿವೆಡ್ ಸಲ್ಲಿಸಿದ್ದಾರೆ. ಹಾಗಾದರೆ ಅವರ ಸಾಲ ತೀರಿಸಿದರು ಯಾರು ಎಂದು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹೆಸರೇಳದೇ ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.
ವಿಶ್ವನಾಥ್ ಸಾಲ ಹೇಗೆ ತೀರಿತು ಎಂಬುವುದನ್ನು ಬಹಿರಂಗ ಪಡಿಸಲಿ: ಹಳ್ಳಿ ಹಕ್ಕಿಗೆ ಸಾರಾ ಸವಾಲು
ಕಳೆದ ಬಾರಿ ಚುನಾವಣೆಯಲ್ಲಿ ನನಗೆ ಸಾಲವಿದೆ ಎಂದು ಹೇಳುತ್ತಿದ್ದವರು. ಉಪಚುನಾವಣೆಯಲ್ಲಿ ಸಾಲ ಇಲ್ಲವೆಂದು ಅಫಿಡಿವೆಡ್ ಸಲ್ಲಿಸಿದ್ದಾರೆ. ಹಾಗಾದರೆ ಅವರ ಸಾಲ ತೀರಿಸಿದರು ಯಾರು ಎಂದು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹೆಸರೇಳದೇ ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯಲ್ಲಿ ಜೆಡಿಎಸ್ ಸಮಾವೇಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018 ರಲ್ಲಿ ಹುಣಸೂರಿನಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಗೆದ್ದ ನಂತರ ನನಗೆ ಚುನಾವಣೆಯಿಂದ ಸಾಲ ಆಗಿದೆ ಅಂತ ಹೇಳುತ್ತಿದ್ದಾರೆ. ಆದರೀಗ ನಾಮಪತ್ರ ಸಲ್ಲಿಕೆಯಲ್ಲಿ ಸಾಲ ಇಲ್ಲವೆಂದು ಹೇಳಿಕೊಂಡಿದ್ದಾರೆ. ಹೇಗೆ ಸಾಲ ತೀರಿತು ಎಂಬುವುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಇನ್ನು, ಪಕ್ಷಕ್ಕೆ ದ್ರೋಹ ಮಾಡಿ ಹೋಗಿರುವ ಅನರ್ಹರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಈ ಚುನಾವಣೆ ಧರ್ಮ, ಅಧರ್ಮ ನಡುವೆ ನಡೆಯುತ್ತಿರುವ ಚುನಾವಣೆ. ಇದರಲ್ಲಿ ಧರ್ಮ ಯಾವತ್ತಿಗೆ ಗೆಲ್ಲುತ್ತದೆ. ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡಿ ಗೆಲ್ಲುತ್ತೇವೆ ಎಂದರು.