ಕರ್ನಾಟಕ

karnataka

By

Published : Jan 12, 2021, 9:16 PM IST

ETV Bharat / city

ಮಂಗಳೂರಿನ ಲಾಡ್ಜ್​​​​ನಲ್ಲಿ ವೇಶ್ಯಾವಾಟಿಕೆ: ನಾಲ್ವರು ಮಹಿಳೆಯರ ರಕ್ಷಣೆ, ಐವರು ಆರೋಪಿಗಳ ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್​ ಮೇಲೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ, ನಾಲ್ವರು ಮಹಿಳೆಯರನ್ನು ರಕ್ಷಿಸಿದ ಘಟನೆ ಮಂಗಳೂರಿನ ಹಂಪನಕಟ್ಟೆಯಲ್ಲಿ ನಡೆದಿದೆ.

Five arrest in a Prostitution case at mangalore
ಬಂಧಿತ ಆರೋಪಿಗಳು

ಮಂಗಳೂರು:ಹಂಪನಕಟ್ಟೆಯ ಲಾಡ್ಜ್​​ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಐವರನ್ನು ಬಂಧಿಸಿ, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ...ಕ್ರಿಕೆಟ್‌ ಪಂದ್ಯಾವಳಿ ವೇಳೆ ಮಾರಾಮಾರಿ: ಹಲವರಿಗೆ ಗಾಯ, 10 ಜನರ ಬಂಧನ

ಬಂಧಿತರಾದ ಲಾಡ್ಜ್ ಮಾಲೀಕ ಮೋಹನ್, ಮ್ಯಾನೆಜರ್ ಅಬ್ದುಲ್ ಬಶೀರ್, ರೂಂ ಬಾಯ್ ಉದಯ್ ಶೆಟ್ಟಿ, ಗಿರಾಕಿಗಳಾದ ಭರತ್ ಮತ್ತು ಬಾಲಕೃಷ್ಣ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯರನ್ನು ಇಲ್ಲಿಗೆ ಕರೆ ತಂದಿದ್ದ ಸುನಿಲ್ ಎಂಬಾತ ಪರಾರಿಯಾಗಿದ್ದಾನೆ.

ABOUT THE AUTHOR

...view details