ಮಂಗಳೂರು:ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಶಂಕಿತ ಡೆಂಗ್ಯೂಗೆ ಬಲಿಯಾದ ಘಟನೆ ಇಂದು ನಡೆದಿದೆ.
ಡೆಂಗ್ಯುವಿಗೆ ಬಂಟ್ವಾಳದಲ್ಲಿ ಮೊದಲ ಬಲಿ?
ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಶಂಕಿತ ಡೆಂಗ್ಯೂಗೆ ಬಲಿಯಾದ ಘಟನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ. ಇದು ಬಂಟ್ವಾಳದಲ್ಲಿ ಶಂಕಿತ ಡೆಂಗ್ಯುವಿಗೆ ಬಲಿಯಾದ ಮೊದಲ ಪ್ರಕರಣ.
ಶಂಕಿತ ಡೆಂಗ್ಯುವಿಗೆ ಬಂಟ್ವಾಳದಲ್ಲಿ ಮೊದಲ ಬಲಿ
ತಾಲೂಕಿನ ಬಿ. ಮೂಡ ಗ್ರಾಮದ ತಲಪಾಡಿ ಸಮೀಪದ ಪೊನ್ನೋಡಿ ನಿವಾಸಿ ಪ್ರಶಾಂತ್ ಯಾನೆ ಪಚ್ಚು(39) ಮೃತಪಟ್ಟವರು. ಇದು ಬಂಟ್ವಾಳದಲ್ಲಿ ಶಂಕಿತ ಡೆಂಗ್ಯುವಿಗೆ ಬಲಿಯಾದ ಮೊದಲ ಪ್ರಕರಣವಾಗಿದೆ.
ಜ್ವರದಿಂದ ಬಳಲುತ್ತಿದ್ದ ಪ್ರಶಾಂತ್, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.