ಕರ್ನಾಟಕ

karnataka

ಮಂಗಳೂರು: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದನ ಕಳ್ಳತನ ಕೃತ್ಯ

ಕಟೀಲು ಸಮೀಪದ ಮೂರುಕಾವೇರಿ ಬಳಿಯಿರುವ ಮಾರಿಗುಡಿ ದೇವಳದ ಬಳಿ ಬಿಡಾಡಿ ದನ ಕದಿಯುತ್ತಿದ್ದ ದೃಶ್ಯವೊಂದು ಮಾರಿಗುಡಿ ದೇವಳದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

By

Published : Jul 16, 2020, 10:36 PM IST

Published : Jul 16, 2020, 10:36 PM IST

cattle-theft-scene-recorded-in-marigudi-cc-camera
ಹಸು ಕಳ್ಳತನ

ಮಂಗಳೂರು:ಸ್ವಿಫ್ಟ್‌ ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿರುವ ಬಿಡಾಡಿ ದನವನ್ನು ಕಳ್ಳತನ ಮಾಡುವ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಗರದ ಹೊರವಲಯದ ಕಟೀಲು ಸಮೀಪದ ಮೂರುಕಾವೇರಿ ಬಳಿಯಿರುವ ಮಾರಿಗುಡಿ ದೇವಳದ ಬಳಿ ಜುಲೈ 9ರ ರಾತ್ರಿ 10.24ಕ್ಕೆ ಈ ಕೃತ್ಯ ನಡೆದಿದ್ದು, ಇಂದು ಸಿಸಿ ಕ್ಯಾಮೆರಾ ದೃಶ್ಯದಿಂದ ಪ್ರಕರಣ ಬಯಲಿಗೆ ಬಂದಿದೆ.

ಸಿಸಿ ಕ್ಯಾಮರಾ ದೃಶ್ಯದ ಮೂಲಕ ದನಗಳವು ಕೃತ್ಯ ಬಯಲು

ಮಾರಿಗುಡಿ ದೇವಳದ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ‌. ಈ ದೃಶ್ಯವನ್ನು ಅಂದು ದೇವಳದ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಆದರೆ ಲಾಕ್‌ಡೌನ್‌ನಿಂದ ದೇವಳಕ್ಕೆ ಆಡಳಿತ ಮಂಡಳಿಯ ಯಾರೂ ಬರುತ್ತಿರಲಿಲ್ಲ‌. ಇಂದು ಸಂಕ್ರಮಣದ ನಿಮಿತ್ತ ಆಡಳಿತ ಮಂಡಳಿಯವರು ದೇವಳಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯ ಮೂಲಕ ಈ ವಿಚಾರ ಬಹಿರಂಗಗೊಂಡಿದೆ‌.

ಸಿಸಿ ಕ್ಯಾಮರಾದಲ್ಲೇನಿದೆ?:

ನಾಲ್ಕೈದು ಬೀಡಾಡಿ ದನಗಳು ಕುಳಿತಿರುವ ಜಾಗದಲ್ಲಿ ಕಾರೊಂದು ಬಂದು ನಿಲ್ಲುತ್ತದೆ. ಆ ಕಾರಿನಿಂದ ಇಬ್ಬರು ಮುಸುಕುಧಾರಿಗಳು ಇಳಿಯುತ್ತಾರೆ. ಅದರಲ್ಲಿ ಓರ್ವ ಒಂದು ದನಕ್ಕೆ ತಿನಿಸೊಂದನ್ನು ಹಾಕಿ ಹಿಡಿಯುತ್ತಾನೆ. ಮತ್ತೋರ್ವ ಕೈಯಲ್ಲಿರುವ ಹಗ್ಗವನ್ನು ದನದ ಕತ್ತಿಗೆ ಕಟ್ಟುತ್ತಾನೆ. ಬಳಿಕ ಇಬ್ಬರೂ ಸೇರಿ ಆ ಹಸುವನ್ನು ಬಲವಂತವಾಗಿ ಕಾರಿನೊಳಗೆ ನುಗ್ಗಿಸಿ ಕದಿಯುತ್ತಿರುವ ದೃಶ್ಯ ಸರೆಯಾಗಿದೆ.

ಈ ದನಗಳು ಹೈನುಗಾರಿಕೆ ನಡೆಸುತ್ತಿರುವ ಸ್ಥಳೀಯರೊಬ್ಬರಿಗೆ ಸೇರಿದ್ದಾಗಿದ್ದು, ಅವುಗಳು ಬಿಡಾಡಿಗಳಂತೆ ತಿರುಗಾಡುತ್ತಿದ್ದವು. ಈ ಬಗ್ಗೆ ಈವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ಆದರೆ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೊ ಎಂಬವರು ಮುಲ್ಕಿ ಪೊಲೀಸ್ ಠಾಣೆಗೆ ಕರೆ ಮಾಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details