ಕರ್ನಾಟಕ

karnataka

ETV Bharat / city

ಕಲಬುರ್ಗಿ: ಲವ್ ಜಿಹಾದ್ ವಿರುದ್ಧ ಮಾತನಾಡಿದ‌ ಶ್ರೀಗಳ ಮಠದ ಮೇಲೆ ಕಲ್ಲು ತೂರಾಟ

ಮಠದ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕಲಬುರ್ಗಿ ಎಸ್​ಪಿಗೆ ಹಿಂದು ಜಾಗೃತಿ ಸೇನೆಯ ಮುಖಂಡರು ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

By

Published : Dec 31, 2021, 12:20 PM IST

kalaburagi
ಕಲ್ಲು ತೂರಾಟ

ಕಲಬುರ್ಗಿ:ಅಫಜಲಪುರ ತಾಲೂಕಿನ ಮಾಶಾಳ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಕೇದಾರ ಶ್ರೀಗಳು ಈಚೆಗೆ ಲವ್​ ಜಿಹಾದ್​ ವಿರುದ್ಧ ಮಾತನಾಡಿದ್ದಕ್ಕೆ ಯಾರೋ ಕಿಡಿಗೇಡಿಗಳು ಮಠದ ಮೇಲೆ ತೂರಾಟ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಗುರುವಾರ ರಾತ್ರಿ ವೇಳೆ ಮಠದಲ್ಲಿ ಶ್ರೀಗಳು ಇದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಕೇದಾರ ಶ್ರೀಗಳ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಕಿಡಿಗೇಡಿಗಳು ಮಠದ ಕಿಟಕಿಗಳಿಗೆ ಕಲ್ಲಿನಿಂದ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ‌. ಮಠದ ಭಕ್ತರು ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌‌ ನಡೆಸಿದ್ದಾರೆ.

ಇದೇ 28 ರಂದು ಕಲಬುರ್ಗಿಯಲ್ಲಿ ಹಿಂದು ಜಾಗೃತಿ ಸೇನೆ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳು ಲವ್ ಜಿಹಾದ್, ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡಿದ್ದರು. ಇದಕ್ಕಾಗಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಮಠದ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕಲಬುರ್ಗಿ ಎಸ್​ಪಿಗೆ ಹಿಂದು ಜಾಗೃತಿ ಸೇನೆಯ ಮುಖಂಡರು ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ನೀರಾವರಿ ಯೋಜನೆ ಅನುಷ್ಠಾನದಲ್ಲಿ ತಾರತಮ್ಯ ಮಾಡಿಲ್ಲ: ಸಚಿವ ಮಾಧುಸ್ವಾಮಿ ಕಣ್ಣೀರು

For All Latest Updates

ABOUT THE AUTHOR

...view details