ಕರ್ನಾಟಕ

karnataka

ಚಳಿ ನಡುವೆ ಮಳೆಯ ಸಿಂಚನ: ಆತಂಕದಲ್ಲಿ ವಿಜಯಪುರ - ಧಾರವಾಡ ಜನತೆ

ಧಾರವಾಡ ಹಾಗೂ ವಿಜಯನಗರ ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಜಿಟಿ ಜಿಟಿ ಮಳೆ ಪ್ರಾರಂಭವಾಗಿದೆ.

By

Published : Nov 28, 2020, 12:13 PM IST

Published : Nov 28, 2020, 12:13 PM IST

rain
ವಿಜಯಪುರ-ಧಾರವಾಡದಲ್ಲಿ ಮಳೆ

ವಿಜಯಪುರ/ಧಾರವಾಡ:ನಿವಾರ್ ಚಂಡಮಾರುತದ ಪರಿಣಾಮ ಧಾರವಾಡ ಹಾಗೂ ವಿಜಯನಗರ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಜಿಟಿ ಜಿಟಿ ಮಳೆ ಪ್ರಾರಂಭವಾಗಿದೆ.

ವಿಜಯಪುರ - ಧಾರವಾಡದಲ್ಲಿ ಮಳೆ

ವಾಯುಭಾರ ಕುಸಿತದಿಂದ ಗುಮ್ಮಟನಗರಿಯಲ್ಲಿ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಚಳಿಯಿಂದ ತತ್ತರಿಸಿದ್ದ ಜನತೆಗೆ ಮಳೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿದ್ದು, ಜೊತೆಗೆ ತಣ್ಣನೆಯ ಗಾಳಿ ಬೀಸುತ್ತಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ‌ನಿರ್ಮಾಣವಾಗಿದ್ದು, ಜನ ಮನೆಯಿಂದ ಹೊರಗೆ ಓಡಾಡುವುದನ್ನೇ ನಿಲ್ಲಿಸಿದ್ದಾರೆ.

ಇನ್ನು ಬೆಳಗ್ಗೆಯಿಂದ ಧಾರವಾಡ ಸೇರಿದಂತೆ ಬಹುತೇಕ‌ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿದೆ. ಜಿಟಿ ಜಿಟಿ ಮಳೆಯಿಂದಾಗಿ ಧಾರವಾಡ ಸೇರಿದಂತೆ ವಿವಿಧ ಪಟ್ಟಣದ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ.

ABOUT THE AUTHOR

...view details