ಹುಬ್ಬಳ್ಳಿ : ಚಿನ್ನಾಭರಣ ಮಾಡುವ ಸಲುವಾಗಿ ಚಿನ್ನದ ಅಂಗಡಿ ಮಾಲೀಕ ನೀಡಿದ್ದ 5.5 ಲಕ್ಷ ರೂ. ಮೌಲ್ಯದ 108 ಗ್ರಾಂ ಚಿನ್ನದ ಸಮೇತ ಕೆಲಸಗಾರರು ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ರತನ್ ಮಾಜಿ ಹಾಗೂ ನಾಸೀರ್ ಮಲ್ಲಿಕ್ ಚಿನ್ನದೊಂದಿಗೆ ಪರಾರಿಯಾದ ಕೆಲಸಗಾರರು.
ಇಲ್ಲಿನ ಶಾ ಬಜಾರ್, ಗೌಳಿ ಗಲ್ಲಿಯ ಮಿರಜುಲ್ ಸೈಯದಲಿ ಮೋಸ ಹೋದ ಚಿನ್ನದಂಗಡಿ ಮಾಲೀಕರಾಗಿದ್ದಾರೆ. ಈ ಹಿಂದೆ ರತನ್ ಮಾಜಿ ಹಾಗೂ ನಾಸೀರ್ ಮಲ್ಲಿಕ್ ಅವರು ಅಂಗಡಿಯ ಮಾಲೀಕ ಕೊಡುತ್ತಿದ್ದ ಗಟ್ಟಿ ಚಿನ್ನವನ್ನು ಪಡೆದು ಆಭರಣ ಮಾಡಿಕೊಡುತ್ತಿದ್ದರು.