ಕರ್ನಾಟಕ

karnataka

ಯುವತಿ ಜೊತೆ ಸಲುಗೆ.. ವಾರ್ನ್​ ಮಾಡಿದರೂ ಸಹವಾಸ ಬಿಡದ್ದಕ್ಕೆ ಕಲಘಟಗಿಯಲ್ಲಿ ಬಿತ್ತು ಯುವಕನ ಹೆಣ!

ಮಂಜುನಾಥ್​ ಆ ಯುವತಿಯ ಸ್ನೇಹ ಬಿಟ್ಟಿರಲಿಲ್ಲ. ಇದರಿಂದ ಕೆರಳಿದ ಬಸವರಾಜನು ಮಂಜುನಾಥನನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಚ್ಚು ಮುರಿದುಹೋದ ಕಾರಣ ಕಲ್ಲಿನಿಂದ ಜಜ್ಜಿದ್ದಾನೆ.

By

Published : Jan 18, 2022, 10:44 PM IST

Published : Jan 18, 2022, 10:44 PM IST

Updated : Jan 18, 2022, 11:02 PM IST

ಯುವಕನ ಹೆಣ

ಹುಬ್ಬಳ್ಳಿ:ತನ್ನ ಪರಿಚಯಸ್ಥ ಹುಡುಗಿಯೊಂದಿಗೆ ಸಲುಗೆಯಿಂದ ಇದ್ದ ಎಂಬ ಕಾರಣಕ್ಕೆ ಯುವಕನನ್ನು, ಮತ್ತೊಬ್ಬ ಯುವಕ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕೊಲೆಯಾದ ಯುವಕ ಮಂಜುನಾಥ್​

ಗ್ರಾಮದ ಮಂಜುನಾಥ ಶಂಕ್ರಪ್ಪ ಮರೆಪ್ಪನವರ್​ ಕೊಲೆಯಾದ ಯುವಕ. ಅದೇ ಗ್ರಾಮದ ಬಸವರಾಜ ಲಕ್ಷ್ಮಣ ಕುರಡಿಕೇರಿ ಅಲಿಯಾಸ್ ಸಿಂಧೂರ್​ ಕೊಲೆಗೈದ ಆರೋಪಿ. ಕೊಲೆಯಾದ ಮಂಜುನಾಥ್​ ಗ್ರಾಮದ ಯುವತಿಯೊಬ್ಬಳ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ. ಆ ಹುಡುಗಿಯ ಪರಿಚಯಸ್ಥನಾಗಿದ್ದ ಬಸವರಾಜನಿಗೆ ಇದು ಸಿಟ್ಟು ತರಿಸಿತ್ತು. ಈ ಹಿಂದೆ ಯುವತಿ ಜೊತೆ ಮಾತನಾಡದಂತೆ ಎಚ್ಚರಿಕೆಯನ್ನು ನೀಡಿದ್ದ ಎನ್ನಲಾಗ್ತಿದೆ.

ಕೊಲೆ ಮಾಡಿದ ಯುವಕ ಬಸವರಾಜ

ಇದು ಮುಂದುವರಿದು, ಒಮ್ಮೆ ಇದೇ ವಿಷಯವಾಗಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು. ಆದರೂ ಮಂಜುನಾಥ್​ ಆ ಯುವತಿಯ ಸ್ನೇಹ ಬಿಟ್ಟಿರಲಿಲ್ಲ. ಇದರಿಂದ ಕೆರಳಿದ ಬಸವರಾಜನು, ಮಂಜುನಾಥನನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಚ್ಚು ಮುರಿದುಹೋದ ಕಾರಣ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಇದರಿಂದ ಗಂಭೀರ ಗಾಯಗೊಂಡ ಮಂಜುನಾಥನನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ರಕ್ತಸ್ರಾವದಿಂದ ಯುವಕ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕಲಘಟಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿ ಬಸವರಾಜನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಗಂಡ-ಹೆಂಡ್ತಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ.. ಕೊಲೆಗೈದು ಆತ್ಮಹತ್ಯೆಗೆ ಶರಣಾದ ಶಂಕೆ

Last Updated : Jan 18, 2022, 11:02 PM IST

ABOUT THE AUTHOR

...view details