ಬೆಂಗಳೂರು: ಎಂಎಲ್ಸಿ ಕೆ ಪಿ ನಂಜುಂಡಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಗೃಹ ಕಚೇರಿ ಕೃಷ್ಣಾ ಬಳಿ ಆಗಮಿಸಿ ಒತ್ತಾಯಿಸಿದ್ದಾರೆ. ಸೋಮವಾರ ಸಿಎಂ ದೆಹಲಿ ಪ್ರವಾಸ ಹಿನ್ನೆಲೆ, ಹೈಕಮಾಂಡ್ ಜೊತೆ ಚರ್ಚಿಸಿ ಕೆ ಪಿ ನಂಜುಂಡಿಗೆ ಸಚಿವ ಸ್ಥಾನ ಕೊಡಿಸುವಂತೆ ಬೆಂಬಲಿಗರು ಆಗ್ರಹಿಸಿದರು.
ಕೆ ಪಿ ನಂಜುಂಡಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಗೃಹ ಕಚೇರಿ ಕೃಷ್ಣಾಗೆ ನೂರಾರು ಬೆಂಬಲಿಗರು ಆಗಮಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನೇತೃತ್ವದಲ್ಲಿ ಸಚಿವ ಸ್ಥಾನಕ್ಕೆ ಒತ್ತಾಯಿಸಲಾಯಿತು. ಸಿಎಂ ಭೇಟಿಗೆ ಬೆಂಬಲಿಗರು ಪಟ್ಟು ಹಿಡಿದರು.