ಕರ್ನಾಟಕ

karnataka

ETV Bharat / city

ಎಂಎಲ್​ಸಿ ಕೆಪಿ ನಂಜುಂಡಿಗೆ ಸಚಿವ ಸ್ಥಾನ ನೀಡುವಂತೆ ಗೃಹ ಕಚೇರಿ ಕೃಷ್ಣಾ ಬಳಿ ಬೆಂಬಲಿಗರ ಆಗ್ರಹ

ಕೆ ಪಿ ನಂಜುಂಡಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಗೃಹ ಕಚೇರಿ ಕೃಷ್ಣಾಗೆ ನೂರಾರು ಬೆಂಬಲಿಗರು ಆಗಮಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ‌ ಮಹಾಸಭಾ ನೇತೃತ್ವದಲ್ಲಿ ಸಚಿವ ಸ್ಥಾನಕ್ಕೆ ಒತ್ತಾಯಿಸಲಾಯಿತು. ಸಿಎಂ ಭೇಟಿಗೆ ಬೆಂಬಲಿಗರು ಪಟ್ಟು ಹಿಡಿದರು..

By

Published : Feb 5, 2022, 3:51 PM IST

supporters urges for minister post for mlc kp nanjundi
ಎಂಎಲ್​ಸಿ ಕೆಪಿ ನಂಜುಂಡಿಗೆ ಸಚಿವ ಸ್ಥಾನ ನೀಡುವಂತೆ ಗೃಹ ಕಚೇರಿ ಕೃಷ್ಣಾ ಬಳಿ ಬೆಂಬಲಿಗರ ಆಗ್ರಹ

ಬೆಂಗಳೂರು: ಎಂಎಲ್​ಸಿ ಕೆ ಪಿ ನಂಜುಂಡಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಗೃಹ ಕಚೇರಿ ಕೃಷ್ಣಾ ಬಳಿ ಆಗಮಿಸಿ ಒತ್ತಾಯಿಸಿದ್ದಾರೆ. ಸೋಮವಾರ ಸಿಎಂ ದೆಹಲಿ ಪ್ರವಾಸ ಹಿನ್ನೆಲೆ, ಹೈಕಮಾಂಡ್ ಜೊತೆ ಚರ್ಚಿಸಿ ಕೆ ಪಿ‌ ನಂಜುಂಡಿಗೆ ಸಚಿವ ಸ್ಥಾನ ಕೊಡಿಸುವಂತೆ ಬೆಂಬಲಿಗರು ಆಗ್ರಹಿಸಿದರು.

ಕೆ ಪಿ ನಂಜುಂಡಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಗೃಹ ಕಚೇರಿ ಕೃಷ್ಣಾಗೆ ನೂರಾರು ಬೆಂಬಲಿಗರು ಆಗಮಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ‌ ಮಹಾಸಭಾ ನೇತೃತ್ವದಲ್ಲಿ ಸಚಿವ ಸ್ಥಾನಕ್ಕೆ ಒತ್ತಾಯಿಸಲಾಯಿತು. ಸಿಎಂ ಭೇಟಿಗೆ ಬೆಂಬಲಿಗರು ಪಟ್ಟು ಹಿಡಿದರು.

ಇದನ್ನೂ ಓದಿ:ಹಿಜಾಬ್-ಕೇಸರಿ ಶಾಲು ವಿವಾದ : ಭಾರತದ ಭವಿಷ್ಯಕ್ಕೆ ರಾಹುಲ್ ಗಾಂಧಿ ಅಪಾಯಕಾರಿ ಎಂದ ಕರ್ನಾಟಕ ಬಿಜೆಪಿ

ಬೆಂಬಲಿಗರ ಆಗ್ರಹಕ್ಕೆ ಸಮಾಜದ ಸ್ವಾಮೀಜಿಗಳು ಸಾಥ್ ನೀಡಿದರು. ಕುಮಾರ ಮಹಾಸ್ವಾಮಿಗಳು, ವಿಶ್ವಕರ್ಮ ಮಠ ಯಾದಗಿರಿ, ಗಂಗಾಧರ ಸ್ವಾಮಿ, ಮುಕ್ತಿಮಂದಿರ‌ಮಠದ ಬಾಚ್ಚಾರ, ಗಣೇಶ್ವರ ಸ್ವಾಮಿಗಳು ಮೌನೇಶ್ವರ ಮಠ ಕೊಪ್ಪಳ, ವಿರೂಪಾಕ್ಷ ಸ್ವಾಮಿ, ಬ್ರಹ್ಮಾಂಡ ಬೈರಿ ಮಠ ನಾಲತ್ವಾಡ್ ಸಾಥ್ ನೀಡಿದರು.

ABOUT THE AUTHOR

...view details