ಕರ್ನಾಟಕ

karnataka

ಬೆಂಗಳೂರು : ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಪೋಷಕರ ಬೈಗುಳ-ಮನನೊಂದ ಮಗ ನಾಪತ್ತೆ!

ಮಂಜುನಾಥ್ ಎಂಬುವರ ಪುತ್ರ ನಿಹಾಲ್ ಎಂಬಾತ ಸ್ನೇಹಿತನ ಪುಸ್ತಕದಲ್ಲಿ, ನಾನು ನನ್ನ ಸ್ವತಂತ್ರ ಜೀವನ ಮಾಡಬೇಕು, ನನ್ನನ್ನು ಹುಡುಕಬೇಡಿ ಎಂದು ಲೆಟರ್ ಬರೆದು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾನೆ‌..

By

Published : Feb 6, 2022, 5:22 PM IST

Published : Feb 6, 2022, 5:22 PM IST

Bangalore student Nihal missing case
ಬೆಂಗಳೂರು ವಿದ್ಯಾರ್ಥಿ ನಿಹಾಲ್ ನಾಪತ್ತೆ

ಬೆಂಗಳೂರು:‌‌‌ ಮೊದಲ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪೋಷಕರು ಬೈದಿದ್ದು, ಬೇಸತ್ತ ಮಗ ಮನೆಯಿಂದ ಕಾಣೆಯಾಗಿದ್ದಾನೆ‌.

ಎಂಎನ್​​ಎಂ ಕನ್ಸ್‌ಟ್ರಕ್ಷನ್ಸ್ ಮಾಲೀಕ ಉಲ್ಲಾಳದ ಮಂಜುನಾಥ್ ಎಂಬುವರ ಪುತ್ರ ನಿಹಾಲ್ ಎಂಬಾತ ಸ್ನೇಹಿತನ ಪುಸ್ತಕದಲ್ಲಿ, ನಾನು ನನ್ನ ಸ್ವತಂತ್ರ ಜೀವನ ಮಾಡಬೇಕು. ನನ್ನನ್ನು ಹುಡುಕಬೇಡಿ ಎಂದು ಲೆಟರ್ ಬರೆದು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾನೆ‌.

ನಿಹಾಲ್ ಬರೆದಿಟ್ಟ ಲೆಟರ್​

ನಾಪತ್ತೆಯಾದ ಬಾಲಕನ ಸ್ನೇಹಿತ ಲೆಟರ್ ಅನ್ನು ತಕ್ಷಣ ನಿಹಾಲ್ ಪೋಷಕರಿಗೆ ತೋರಿಸಿದ್ದಾನೆ. ಅಲ್ಲದೇ‌ ಅಕ್ಕಪಕ್ಕದ ಸಿಸಿಟಿವಿಯಲ್ಲಿಯೂ ಪೋಷಕರು ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಂದಿಗೆ ನಿಹಾಲ್ ಬೈಕ್​ನಲ್ಲಿ ಹೋಗುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಹರಿದ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಫಸ್ಟ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಿಹಾಲ್ ಪರೀಕ್ಷೆಯಲ್ಲಿ 2 ಸಬ್​​ಜೆಕ್ಟ್​​ನಲ್ಲಿ ಫೇಲ್ ಆಗಿದ್ದಕ್ಕೆ ನಿನ್ನೆ ನಿಹಾಲ್ ಪೋಷಕರ ಬಳಿ ಕಾಲೇಜಿನವರು ಮಾತನಾಡಿದ್ದರು. ಈ ಬಗ್ಗೆ ನಿಹಾಲ್​ನೊಂದಿಗೆ ಪೋಷಕರು ಮಾತನಾಡಿ, ಬೈದು ಬುದ್ಧಿ ಹೇಳಿದ್ದರು. ಇದೀಗ ನಿಹಾಲ್ ನಾಪತ್ತೆಯಾಗಿದ್ದಾನೆ. ಈ ಕುರಿತು ಸದ್ಯ ಜ್ಞಾನಭಾರತಿ ಪೊಲೀಸ್​​ಸ್ ಠಾಣೆ‌ ಪೋಷಕರು ದೂರು ನೀಡಿದ್ದಾರೆ.

ABOUT THE AUTHOR

...view details