ಬೆಂಗಳೂರು :ಲಾಕ್ಡೌನ್ನಿಂದ ಅದೆಷ್ಟೋ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ದೇವಾಲಯಗಳ ಅರ್ಚಕರು ಕೂಡ ಒಬ್ಬರಾಗಿದ್ದಾರೆ. ಕೊರೊನಾದಿಂದಾಗಿ ಬರೋಬ್ಬರಿ 35 ಸಾವಿರ ದೇವಾಲಯಗಳ ಅರ್ಚಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊರೊನಾ ಭೀತಿಯಿಂದಾಗಿ ಭಕ್ತರು ಕಳೆದ ಎರಡು ತಿಂಗಳಿಂದ ದೇವಾಲಯಗಳ ಕಡೆ ಮುಖ ಮಾಡುತ್ತಿಲ್ಲ. ಸಂಪ್ರದಾಯದಂತೆ ಪ್ರತಿ ದಿನ ದೇವಾಲಯಗಳಿಗೆ ಪೂಜೆ ಸಲ್ಲಿಸುತ್ತಿದ್ದೆವು.
ಆದರೆ, ಈ ಬಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ನಮ್ಮ ಬಳಿ ಆಸ್ಪತ್ರೆಗಳಿಗೆ ಹೋಗಲೂ ಕೂಡ ಹಣ ಇಲ್ಲ. ಕನಿಷ್ಟ ಆಹಾರ ಕಿಟ್ಗಳನ್ನೂ ಕೂಡ ಈಗ ಯಾರೂ ನೀಡ್ತಿಲ್ಲ. ಹಲವು ಬಾರಿ ಸಚಿವರನ್ನ ಭೇಟಿ ಮಾಡಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಅರ್ಚಕರು.