ಕರ್ನಾಟಕ

karnataka

ಜಲ್ಲಿಕಲ್ಲು ತರಲು ಹೋದ ತಾಯಿ ಮಗಳಿಗೆ ವಿದ್ಯುತ್ ಸ್ಪರ್ಶಿಸಿ ಸಾವು

ಜಾನುವಾರುಗಳು ನಿಲ್ಲುವ ಸ್ಥಳದಲ್ಲಿ ಜಲ್ಲಿಕಲ್ಲು ಹಾಕಬೇಕೆಂದು ತಾಯಿ ಮಗಳು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವನೂರು ಗ್ರಾಮದಲ್ಲಿ ನಡೆದಿದೆ.

By

Published : Aug 8, 2019, 2:27 AM IST

Published : Aug 8, 2019, 2:27 AM IST

ತಾಯಿ ಮಗಳಿಗೆ ವಿದ್ಯುತ್ ಸ್ಪರ್ಶಿಸಿ ಸಾವು

ಚಿಕ್ಕೋಡಿ: ಜಾನುವಾರುಗಳು ನಿಲ್ಲುವ ಸ್ಥಳದಲ್ಲಿ ಜಲ್ಲಿಕಲ್ಲು (ಗರಸು) ಹಾಕಬೇಕೆಂದು ತಾಯಿ ಮಗಳು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವನೂರು ಗ್ರಾಮದಲ್ಲಿ ನಡೆದಿದೆ.

ಪಾರ್ವತಿ ರೂಪನೂರ (68) ತಾಯಿ, ಕೃಷ್ಣಾಬಾಯಿ ವಾಗ್ಮುಡೆ (48) ಮಗಳು ಮೃತರು. ಜಾನುವಾರು ನಿಲ್ಲುವ ಜಾಗ ಮಳೆಯಿಂದ ಕೆಸರಾಗಿದ್ದಕ್ಕೆ ಜಲ್ಲಿ ತರಲು ಹೋಗಿದ್ದರು. ಜಲ್ಲಿಯ ಮೇಲೆ ಬಿದ್ದಿದ್ದ ತಂತಿಯನ್ನು ಸರಿಸುವಾಗ ವಿದ್ಯುತ ಸ್ಪರ್ಶಿಸಿ ಸ್ಥಳದಲ್ಲೇ ತಾಯಿ, ಮಗಳು ಸಾವನಪ್ಪಿದ್ದಾರೆ.

ಈ ಕುರಿತು ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details