ಕರ್ನಾಟಕ

karnataka

ETV Bharat / business

ಟ್ರಾಯ್ ಆದೇಶಕ್ಕೆ ತಲೆದೂಗಿದ ವೊಡಾ - ಐಡಿಯಾ... 10 ಕೋಟಿ ಗ್ರಾಹಕರಿಗೆ ಅನುಕೂಲ

ಲಾಕ್​ಡೌನ್ ಸಂದರ್ಭದಲ್ಲಿ ಯಾವುದೇ ಬಳಕೆದಾರ ದೂರ ಸಂಪರ್ಕ ಸೇವೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕು. ಪ್ರಿಪೇಯ್ಡ್​ ಸೇವೆಯಲ್ಲಿ ತೊಂದರೆ ಆಗದಂತೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಟ್ರಾಯ್ ಟೆಲಿಕಾಂ ಆಪರೇಟರ್​ಗಳನ್ನು ಮನವಿ ಮಾಡಿದೆ. ಇಂತಹ ಬಿಕ್ಕಟ್ಟಿನ ಲಾಕ್​ಡೌನ್ ಸಂದರ್ಭದಲ್ಲಿ ಪ್ರಿಪೇಯ್ಡ್​ ಬಳಕೆದಾರರಿಗೆ ಪಾವತಿ, ರಿಚಾರ್ಜ್​ ವೋಚರ್​ ಲಭ್ಯತೆ ಹಾಗೂ ಸೇವಾ ಅವಧಿಯನ್ನು ವಿಸ್ತರಿಸುವ ಮೂಲಕ ತಡೆರಹಿತ ಸೇವೆ ನೀಡಬೇಕು ಎಂದು ಆದೇಶಿಸಿತ್ತು.

By

Published : Mar 31, 2020, 11:53 PM IST

ವೊಡಾ-ಐಡಿಯಾ
Vodafone Idea

ನವದೆಹಲಿ: ಕೊರೊನಾ ವೈರಸ್ ತಂದಿಟ್ಟ ಬಿಕ್ಕಟ್ಟಿನಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಕಡಿಮೆ ಆದಾಯದ 10 ಕೋಟಿ ಚಂದಾದಾರರಿಗೆ ಪ್ರಿಪೇಯ್ಡ್ ಯೋಜನೆಗಳ ಮಾನ್ಯತೆಯನ್ನು ಏಪ್ರಿಲ್ 17ರವರೆಗೆ ವಿಸ್ತರಿಸುವುದಾಗಿ ವೊಡಾಫೋನ್- ಐಡಿಯಾ ಹೇಳಿದೆ.

ಕೋವಿಡ್​-19 ಸೋಂಕು ವಿಶ್ವಾದ್ಯಂತ ಹಲವು ಕಷ್ಟಗಳನ್ನು ಸೃಷ್ಟಿಸಿದೆ. ಅದರಲ್ಲಿ ವಿಶೇಷವಾಗಿ ಕಡಿಮೆ ಆದಾಯದ ಫೀಚರ್ ಫೋನ್‌ಗಳನ್ನು ಬಳಸುವ ಪ್ರಿಪೇಯ್ಡ್ ಗ್ರಾಹಕರಿಗೆ ಪರಿಣಾಮ ತಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂತಹ ಸಂಕಷ್ಟದಲ್ಲಿ ಸಿಲುಕಿದ ಗ್ರಾಹಕರಿಗೆ ಅವರ ಸೇವಾ ಸಂಪರ್ಕ ಖಚಿತಪಡಿಸಿಲು ಬಯಸುತ್ತೇವೆ. ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ವೊಡಾಫೋನ್- ಐಡಿಯಾ ಲಿಮಿಟೆಡ್ (ವಿಐಎಲ್) ತನ್ನ ಪ್ರಿಪೇಯ್ಡ್ ಯೋಜನೆಗಳ ಮಾನ್ಯತೆಯನ್ನು ವಿಸ್ತರಿಸುತ್ತಿದೆ ಎಂದು ಹೇಳಿದೆ.

ಯೋಜನಾ ವಾಯ್ದೆಯು ಮುಗಿದಿದ್ದರೂ ಉಚಿತ ವೆಚ್ಚದ ವಿಸ್ತರಣೆ ಸೇವೆಯನ್ನು ಲಕ್ಷಾಂತರ ಬಳಕೆದಾರರಿಗೆ ಒಳಬರುವ ಕರೆಗಳನ್ನು ನೀಡಲಾಗುತ್ತಿದೆ. ಅವರ ಯೋಜನೆಯ ಮಾನ್ಯತೆಯು ಈಗಾಗಲೇ ಮುಕ್ತಾಯಗೊಂಡಿದೆ. ಆದರೂ ನಮ್ಮ ನೆಟ್​ವರ್ಕ್​ ಸೇವೆ ಮುಂದುವರಿಯಲಿದೆ ಎಂದಿದೆ.

ಕಂಪನಿಯು ಸುಮಾರು 10 ಕೋಟಿ ಗ್ರಾಹಕರ 10 ರೂ. ಕ್ರೆಡಿಟ್ ಟಾಕ್ ಟೈಮ್ ಅನ್ನು ಘೋಷಿಸಿದೆ. ಚಂದಾದಾರರು ತಮ್ಮ ಕರೆ ಅಥವಾ ಎಸ್ಎಂಎಸ್​ಗಳನ್ನು ಕಳುಹಿಸುವ ಮೂಲಕ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಹೇಳಿದೆ.

ರಾಷ್ಟ್ರಾದ್ಯಂತ 21 ದಿನಗಳವರೆಗೆ ಲಾಕ್​ಡೌನ್​ ಜಾರಿಯಲಿದ್ದು, ಈ ವೇಳೆಯಲ್ಲಿ ಪ್ರಿಪೇಯ್ಡ್​ ಸಿಮ್​ ಬಳಕೆದಾರರ ಸೇವಾ ವ್ಯಾಲಿಡಿಟಿ ಅವಧಿ ಮುಂದೂಡುವಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೋರಿತ್ತು.

ಲಾಕ್​ಡೌನ್ ಸಂದರ್ಭದಲ್ಲಿ ಯಾವುದೇ ಬಳಕೆದಾರ ದೂರ ಸಂಪರ್ಕ ಸೇವೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕು. ಪ್ರಿಪೇಯ್ಡ್​ ಸೇವೆಯಲ್ಲಿ ತೊಂದರೆ ಆಗದಂತೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಟ್ರಾಯ್ ಟೆಲಿಕಾಂ ಆಪರೇಟರ್​ಗಳನ್ನು ಮನವಿ ಮಾಡಿದೆ. ಇಂತಹ ಬಿಕ್ಕಟ್ಟಿನ ಲಾಕ್​ಡೌನ್ ಸಂದರ್ಭದಲ್ಲಿ ಪ್ರಿಪೇಯ್ಡ್​ ಬಳಕೆದಾರರಿಗೆ ಪಾವತಿ, ರಿಚಾರ್ಜ್​ ವೋಚರ್​ ಲಭ್ಯತೆ ಹಾಗೂ ಸೇವಾ ಅವಧಿಯನ್ನು ವಿಸ್ತರಿಸುವ ಮೂಲಕ ತಡೆರಹಿತ ಸೇವೆ ನೀಡಬೇಕು ಎಂದು ಆದೇಶಿಸಿತ್ತು.

ABOUT THE AUTHOR

...view details