ಚೆನ್ನೈ :ತಮಿಳುನಾಡಿನ ಮಟ್ಟಿಗೆ ಹೇಳುವುದಾದರೆ, ಚುನಾವಣಾ ರಾಜಕೀಯಕ್ಕೆ ಧುಮುಕುವುದೆಂದರೆ ಅಷ್ಟೊಂದು ಸರಳವಲ್ಲ. ಅಲ್ಲಿರುವ ಪಕ್ಷ, ಪಕ್ಷ ಸಂಘಟನೆಗೆ ಹೊಸಬರು ಧೂಳೀಪಟವೆಂದೇ ಹೇಳಬಹುದು. ಆದ್ರೂ ಮೊನ್ನೆ ನಡೆದ ಚುನಾವಣೆಯಲ್ಲಿ ಕೆಲವರು ತಮ್ಮ ಅದೃಷ್ಠ ಪರೀಕ್ಷೆಗೆ ಕೈ ಹಾಕಿದ್ದರು.
ಇಲ್ಲಿನ ರಾಜಕೀಯಕ್ಕೆ ಮುಂದಡಿಯಿಡುವ ಧೈರ್ಯವನ್ನು ಈ ಬಾರಿ ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಮಾಜಿ ಅಧಿಕಾರಿಗಳು ಮಾಡಿದ್ದಾರೆ.
16ನೇ ವಿಧಾನಸಭೆಯ ಚುನಾವಣೆಯಲ್ಲಿ ಮಾಜಿ ಸರ್ಕಾರಿ ಅಧಿಕಾರಿಗಳಾದ ಕೆ ಅಣ್ಣಾಮಲೈ ಮತ್ತು ಕರೂರು ಜಿಲ್ಲೆಯ ಅರಾವಕುರಿಚಿಯಿಂದ ಸಂತೋಷ್ ಬಾಬು ಮತ್ತು ಚೆನ್ನೈನ ವೇಲಾಚೇರಿಯಿಂದ ಕ್ರಮವಾಗಿ ಸ್ಪರ್ಧಿಸಿದ್ದರು. ಆದರೂ ಯಶಸ್ಸು ಅವರ ಕೈ ಬಿಟ್ಟಿತ್ತು.
ದ್ರಾವಿಡ ಪ್ರಮುಖ ಎಐಎಡಿಎಂಕೆ ಜೊತೆಗಿನ ಮೈತ್ರಿಯಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿಯ ಹೈಕಮಾಂಡ್ ಉತ್ತೇಜಿಸಿದರೂ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 24,816 ಮತಗಳ ಅಂತರದಿಂದ ಸೋಲನುಭವಿಸಿದರು.
ಅವರು 68,553 ಮತಗಳನ್ನು ಗಳಿಸಿದ್ದು, 38.71 ಶೇಕಡಾ ದಾಖಲಿಸಿದ್ದಾರೆ. ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಧನ್ಯವಾದ ಹೇಳುವಾಗ, ಅವರು ತಮ್ಮ ಜೀವನದಲ್ಲಿ ಹಲವಾರು ವೈಫಲ್ಯಗಳಲ್ಲಿ ಇದೂ ಕೂಡಾ ಒಂದಾಗಿದೆ ಎಂದು ಹೇಳಿದರು.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ಬಲವಾಗಿ ಬೆಳೆಯುತ್ತದೆ. 2026ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಯಶಸ್ಸನ್ನು ಗಳಿಸುತ್ತದೆ ಎಂದು ಹೇಳಿದರು.
ಅಂತೆಯೇ, ತಮಿಳುನಾಡು ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯದರ್ಶಿಯಾಗಿದ್ದ ಮತ್ತು ಭಾರತ್ ನೆಟ್ನಂತಹ ಹಲವಾರು ಐಟಿ ಯೋಜನೆಗಳಲ್ಲಿ ಹೆಸರುವಾಸಿಯಾಗಿದ್ದ ಮಕ್ಕಲ್ ನೀಧಿ ಮೈಯಂ ಅಭ್ಯರ್ಥಿ ಸಂತೋಷ್ ಬಾಬು ಅವರು ಕೇವಲ 23,072 ಮತಗಳನ್ನು ಗಳಿಸಿ 13.06 ಶೇಕಡಾ ಮತಗಳನ್ನು ಗಳಿಸಿದ್ದು, ವೇಲಾಚೇರಿ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.