ದೊಡ್ಡಬಳ್ಳಾಪುರ: ನಗರದಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ಶತಮಾನದ ಮರದ ರೆಂಬೆ ನೆಲಕ್ಕುರುಳಿವೆ. ಮಳೆ ನೀರು ರಾಜೀವ್ ಗಾಂಧಿ ಬಡಾವಣೆಯ ಮನೆಗಳಿಗೆ ನುಗ್ಗಿ ಪರದಾಡುವಂತಾಗಿದೆ. ದೊಡ್ಡಬಳ್ಳಾಪುರ ನಗರದಲ್ಲಿ ಗಾಳಿಯೊಂದಿಗೆ ಬಿದ್ದ ಭಾರಿ ಮಳೆಗೆ ಶಾಂತಿನಗರದ 7ನೇ ಕ್ರಾಸ್ನಲ್ಲಿನ ಶತಮಾನದ ಅರಳಿಮರದ ಬೃಹತ್ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮರದ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ಭಾರಿ ಮಳೆಗೆ ನೆಲಕ್ಕುರುಳಿದ ಅರಳಿಮರದ ಬೃಹತ್ ರೆಂಬೆ
ದೊಡ್ಡಬಳ್ಳಾಪು ರನಗರದ ಶಾಂತಿನಗರದಲ್ಲಿ ಶತಮಾತನದ ಅರಳಿ ಮರದ ಬೃಹತ್ ರೆಂಬೆ ನೆಲಕ್ಕುರುಳಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ನೆಲಕ್ಕುರುಳಿದ ಶತಮಾನದ ಅರಳಿಮರ
ಭಾರಿ ಮಳೆಯಿಂದಾಗಿ ಗಂಗಧಾರಪುರ ಲೇಔಟ್ನ ಅಪಾರ್ಟ್ಮೆಂಟ್ಗಳ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯಲ್ಲಿ ಹರಿದು ಬಂದ ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದೆ. ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸ ಪಡುವಂತಾಯಿತು.