ಕರ್ನಾಟಕ

karnataka

ETV Bharat / briefs

ಭಾರಿ ಮಳೆಗೆ ನೆಲಕ್ಕುರುಳಿದ ಅರಳಿಮರದ ಬೃಹತ್​ ರೆಂಬೆ

ದೊಡ್ಡಬಳ್ಳಾಪು ರನಗರದ ಶಾಂತಿನಗರದಲ್ಲಿ ಶತಮಾತನದ ಅರಳಿ ಮರದ ಬೃಹತ್​ ರೆಂಬೆ ನೆಲಕ್ಕುರುಳಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ನೆಲಕ್ಕುರುಳಿದ ಶತಮಾನದ ಅರಳಿಮರ

By

Published : Jun 1, 2019, 12:29 AM IST

ದೊಡ್ಡಬಳ್ಳಾಪುರ: ನಗರದಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ಶತಮಾನದ ಮರದ ರೆಂಬೆ ನೆಲಕ್ಕುರುಳಿವೆ. ಮಳೆ ನೀರು ರಾಜೀವ್ ಗಾಂಧಿ ಬಡಾವಣೆಯ ಮನೆಗಳಿಗೆ ನುಗ್ಗಿ ಪರದಾಡುವಂತಾಗಿದೆ. ದೊಡ್ಡಬಳ್ಳಾಪುರ ನಗರದಲ್ಲಿ ಗಾಳಿಯೊಂದಿಗೆ ಬಿದ್ದ ಭಾರಿ ಮಳೆಗೆ ಶಾಂತಿನಗರದ 7ನೇ ಕ್ರಾಸ್​ನ​ಲ್ಲಿನ ಶತಮಾನದ ಅರಳಿಮರದ ಬೃಹತ್ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮರದ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ನೆಲಕ್ಕುರುಳಿದ ಶತಮಾನದ ಅರಳಿಮರ

ಭಾರಿ ಮಳೆಯಿಂದಾಗಿ ಗಂಗಧಾರಪುರ ಲೇಔಟ್​ನ ಅಪಾರ್ಟ್​ಮೆಂಟ್​ಗಳ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯಲ್ಲಿ ಹರಿದು ಬಂದ ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದೆ. ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸ ಪಡುವಂತಾಯಿತು.

ABOUT THE AUTHOR

...view details