ಕರ್ನಾಟಕ

karnataka

ETV Bharat / briefs

ನಕ್ಸಲರ ಅಟ್ಟಹಾಸಕ್ಕೆ ಬಿಜೆಪಿ ಶಾಸಕ ಸೇರಿ ಐವರು ಭದ್ರತಾ ಸಿಬ್ಬಂದಿ ಬಲಿ

ಏಪ್ರಿಲ್​ 11ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ದಾಂತೇವಾಡದಲ್ಲಿ ರ್ಯಾಲಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

By

Published : Apr 9, 2019, 6:22 PM IST

Updated : Apr 9, 2019, 7:48 PM IST

ನಕ್ಸಲರ ಅಟ್ಟಹಾಸ

ದಾಂತೇವಾಡ(ಛತ್ತೀಸಘಡ): ನಕ್ಸಲ ಪೀಡಿತ ಪ್ರದೇಶದಲ್ಲಿ ಬಿಜೆಪಿ ನಡೆಸುತ್ತಿದ್ದ ರ್ಯಾಲಿ ಮೇಲೆ ಮಾವೋವಾದಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಬಿಜೆಪಿ ಎಂಎಲ್​ಎ ಸೇರಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ನಕ್ಸಲರ ಅಟ್ಟಹಾಸ

ಏಪ್ರಿಲ್​ 11ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ದಾಂತೇವಾಡದಲ್ಲಿ ರ್ಯಾಲಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಏಕಾಏಕಿ ನಕ್ಸಲರು ಐಇಡಿ ಬಾಂಬ್​ ಸ್ಫೋಟಗೊಳಿಸಿ, ರ್ಯಾಲಿ ನಡೆಯುತ್ತಿದ್ದ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶಾಸಕ ಸೇರಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಶಾಸಕರು ಬಳಿಕೆ ಮಾಡುತ್ತಿದ್ದ ಕಾರು ಸಹ ಸಂಪೂರ್ಣವಾಗಿ ಜಖಂಗೊಂಡಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ನಕ್ಸಲರ ಅಟ್ಟಹಾಸದಲ್ಲಿ ಶಾಸಕ ಸಾವನ್ನಪ್ಪಿದ್ದಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಇದೇ ವೇಳೆ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದಿರುವ ಪ್ರಧಾನಿ ಮಾವೋವಾದಿಗಳ ವಿರುದ್ಧ ಗುಡುಗಿದ್ದಾರೆ.

Last Updated : Apr 9, 2019, 7:48 PM IST

ABOUT THE AUTHOR

...view details