ಆಂಧ್ರಪ್ರದೇಶ:ಕೊರೊನಾ ಕುರಿತಾಗಿ ಯಾವುದೇ ಫಾರ್ವರ್ಡ್ ಮೆಸೇಜ್ ಬಂದ್ರೂ ಜೋಕೆ... ನಿಮಗೂ ಕುತ್ತು ತರಬಹುದು ಇಂತಹ ಸಂದೇಶಗಳು. ಹೀಗೇ ಬಂದ ಫಾರ್ವರ್ಡ್ ಮೆಸೇಜ್ ಒಂದು ವ್ಯಕ್ತಿಯೊಬ್ಬನ ಪ್ರಾಣಕ್ಕೇ ಸಂಚಕಾರ ತಂದಿರುವ ಘಟನೆ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂ ಪಟ್ಟಣದಲ್ಲಿ ನಡೆದಿದೆ.
ನಾರಾಯಣಪೇಟೆಯ ನಿವಾಸಿ ಗುತ್ತುಲಾ ಶ್ರೀನಿವಾಸ್ (38) ಆತಂಕದಿಂದ ಅನಾರೋಗ್ಯಕ್ಕೊಳಗಾಗಿ ಶುಕ್ರವಾರ ಮೃತಪಟ್ಟಿದ್ದಾರೆ. ವಾಟ್ಸ್ಆ್ಯಪ್ ಸಂದೇಶವೊಂದನ್ನು ರವಾನಿಸಿದ ಆರೋಪದ ಮೇಲೆ ಪೊಲೀಸರು ಈತನನ್ನು ತನಿಖೆ ನಡೆಸಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಶ್ರೀನಿವಾಸ್ ನೊಂದಿದ್ದ ಎನ್ನಲಾಗಿದೆ. ಪತಿ ಸಾವಿನ ಹಿನ್ನೆಲೆಯಲ್ಲಿ ಮಾತನಾಡಿರುವ ಆತನ ಪತ್ನಿ, ಪೊಲೀಸರ ಕಿರುಕುಳದಿಂದಾಗಿಯೇ ಶ್ರೀನಿವಾಸ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ವೆಂಕಟಪದ್ಮಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ನೀಡಿದ್ದಾರೆ.
ನಡೆದಿದ್ದೇನು?
ಆಕ್ವಾ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ್, 'ಕೋಳಿಗಳಿಗೆ ಸೋಂಕಿದ ಕೊರೊನಾ ಸಾಂಕ್ರಾಮಿಕ' ಎಂಬ ವಾಟ್ಸ್ಆ್ಯಪ್ ಸಂದೇಶವನ್ನು ಸ್ವೀಕರಿಸಿದ್ದಾರೆ. ಆ ಬಳಿಕ ಅವರು ಅದನ್ನು ಇತರ ಗುಂಪುಗಳಿಗೆ ರವಾನಿಸಿದ್ದಾರೆ. ಈ ಬಗ್ಗೆ ದೂರು ಸ್ವೀಕರಿಸಿದ ಹೈದರಾಬಾದ್ ಸೈಬರ್ ಅಪರಾಧ ಪೊಲೀಸರು ಶುಕ್ರವಾರ ಶ್ರೀನಿವಾಸ್ ಅವರನ್ನು ಕರೆದು ಪ್ರಶ್ನಿಸಿದ್ದಾರೆ.
ಆದರೆ, ಈ ಬಗ್ಗೆ ತನಗೇನೂ ತಿಳಿದಿಲ್ಲ, ಎಂದು ಶ್ರೀನಿವಾಸ್ ಹೇಳುತ್ತಿದ್ದರೂ ಪೊಲೀಸರು ಮಾತ್ರ ಕೇಳಿಲ್ಲ. ಈ ವಿಚಾರವಾಗಿ ಶ್ರೀನಿವಾಸ್ ತುಂಬಾ ಆತಂಕಕ್ಕೊಳಗಾದರು. ಅಲ್ಲದೇ ಅವರು ಹೆದರಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೂ ಒಳಗಾದರು. ಅವರನ್ನು ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆದರೆ ಯಾವ ಆಸ್ಪತ್ರೆಗಳೂ ಅವರನ್ನು ದಾಖಲಿಸಿಕೊಳ್ಳಲಿಲ್ಲ. ಅಂತಿಮವಾಗಿ ಅವರು ಅಮಲಾಪುರಂ ಕಿಮ್ಸ್ನಲ್ಲಿ ಪ್ರವೇಶ ಪಡೆದರು. ಆದರೆ ಚಿಕಿತ್ಸೆ ಪಡೆದು ಒಂದು ಗಂಟೆಯೊಳಗಾಗಿ ಅವರು ಸಾವನ್ನಪ್ಪಿದ್ದಾರೆ.
ಪೊಲೀಸರು ವಶ ಪಡಿಸಿಕೊಂಡಿದ್ದ ಅವರ ಮೊಬೈಲ್ ಫೋನ್ ಅನ್ನು ಬಳಿಕ ಮರಳಿ ನೀಡಲಾಗಿದೆ. ಹೈದರಾಬಾದ್ನ ಸೈಬರ್ ಕ್ರೈಂನ ಸಿಐ ರಾಜೇಶ್ ಮತ್ತು ಎಸ್ಐ ರಂಜಿತ್ ಕುಮಾರ್ ಅವರು ತನ್ನ ಪತಿಯನ್ನು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಶ್ರೀನಿವಾಸ್ ಪತ್ನಿ ದೂರು ನೀಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಅಮಲಪುರಂ ಪಟ್ಟಣ ಉಸ್ತುವಾರಿ ಎಸ್ಐ ಸತ್ಯಪ್ರಸಾದ್ ತಿಳಿಸಿದ್ದಾರೆ.