ಕರ್ನಾಟಕ

karnataka

ಕೊರೊನಾ ನಡುವೆ ದ.ಕ ಹಾಲು ಒಕ್ಕೂಟ ಉತ್ತಮ ಸೇವೆ ನೀಡುತ್ತಿದೆ.. ರವಿರಾಜ ಹೆಗ್ಡೆ

ಕೊರೊನಾ ಹಿನ್ನೆಲೆಯಲ್ಲಿ ಸರಳ ಸಮಾರಂಭಗಳಿಂದಾಗಿ ಹಾಲಿನ ಮಾರುಕಟ್ಟೆಗೆ ಹೊಡೆತ ಬಿದ್ದಿದೆ. ಆದರೂ ಹೈನುಗಾರರು ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಕೆಎಂಎಫ್ ದ.ಕ. ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.

By

Published : Jun 20, 2020, 9:17 PM IST

Published : Jun 20, 2020, 9:17 PM IST

Inauguration of Bhatkal Density Freezing Unit
Inauguration of Bhatkal Density Freezing Unit

ಬಂಟ್ವಾಳ :ಕೊರೊನಾ ಸಂಕಷ್ಟದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಹೈನುಗಾರರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ದ.ಕ ಹಾಲು ಒಕ್ಕೂಟದ ಅಧ್ಯಕ್ಷ ಕೆ ರವಿರಾಜ ಹೆಗ್ಡೆ ತಿಳಿಸಿದರು.

ಸಾಂದ್ರಶೀತಲೀಕರಣ ಘಟಕವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಒಂದೂವರೆ ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಪರಿವರ್ತನೆ ಮಾಡಲು 15 ಲಕ್ಷ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಈ ಎಲ್ಲಾ ಸವಾಲುಗಳ ಮಧ್ಯೆಯೂ ಇತರ ಎಲ್ಲಾ ಒಕ್ಕೂಟಗಳಿಗಿಂತಲೂ ನಮ್ಮ ಒಕ್ಕೂಟ ಹೈನುಗಾರರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.

ತಾಲೂಕು ದೇವಶ್ಯಮೂಡೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡ ಅಮೃತಧಾರೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮತ್ತು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ಗೋದಾಮನ್ನು ಉದ್ಘಾಟಿಸಿದರು.

ABOUT THE AUTHOR

...view details