ಕರ್ನಾಟಕ

karnataka

ETV Bharat / briefs

ಮತ್ತೆ ಹಿಂಸಾಚಾರದಿಂದ ಸುದ್ದಿಯಾದ ದೀದಿ ರಾಜ್ಯ.. ಭಾರತಿ ಘೋಷ್ ಕಾರಿನ ಮೇಲೆ ಕಲ್ಲು ತೂರಾಟ

ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿಯ ಘಾಟಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಭಾರತಿ ಘೋಷ್ ಕಾರಿನ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ.

By

Published : May 12, 2019, 10:44 AM IST

ಕಲ್ಲು ತೂರಾಟ

ಘಾಟಲ್​(ಪ.ಬಂಗಾಳ):ಪ್ರತಿಯೊಂದು ಹಂತದ ಲೋಕಸಭಾ ಚುನಾವಣೆಯ ವೇಳೆಯೂ ಹಿಂಸಾಚಾರಕ್ಕೆ ಸುದ್ದಿಯಾಗುವ ಪಶ್ಚಿಮ ಬಂಗಾಳ ಇಂದಿನ ವೋಟಿಂಗ್​ನಲ್ಲೂ ಮತ್ತೆ ಇದೇ ವಿಚಾರಕ್ಕೆ ಸುದ್ದಿಯಾಗಿದೆ.

ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿಯ ಘಾಟಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಭಾರತಿ ಘೋಷ್ ಕಾರಿನ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ.

ಭಾರತಿ ಘೋಷ್ ಕಾರಿನ ಮೇಲೆ ಕಲ್ಲು ತೂರಾಟ

ಈ ಘಟನೆಯಲ್ಲಿ ಭಾರತಿ ಘೋಷ್ ಭದ್ರತಾ ಪಡೆಯ ಓರ್ವ ಸಿಬ್ಬಂದಿಯ ತಲೆಗೆ ಗಾಯವಾಗಿದೆ. ಕಲ್ಲು ತೂರಾಟ ನಡೆಸಿದ ತಂಡವನ್ನು ಭಾರತಿ ಘೋಷ್ ಭದ್ರತಾ ಸಿಬ್ಬಂದಿಗಳು ಬೆನ್ನತ್ತಿದ್ದಾರೆ. ಕೇಶ್ಪುರದ ದೊಗಾಚಿಯಾದಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details