ಕರ್ನಾಟಕ

karnataka

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದಲ್ಲಿ ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಪ್ರೇಮ್​ ಸಿಂಗ್ ನಾಯಕ್ ಎಸಿಬಿ ಬಲೆ ಬಿದ್ದಿದ್ದಾನೆ.

By

Published : Jun 4, 2019, 10:38 AM IST

Published : Jun 4, 2019, 10:38 AM IST

Updated : Jun 4, 2019, 11:01 AM IST

ಪಿಡಿಒ ಪ್ರೇಮ್​ ಸಿಂಗ್ ನಾಯಕ್

ಮಂಗಳೂರು:ಇಲ್ಲಿನ ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರೇಮ್ ಸಿಂಗ್ ನಾಯಕ್ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಪಿಡಿಒ ಪ್ರೇಮ್​ ಸಿಂಗ್ ನಾಯಕ್

ಕಡಬ ನಿವಾಸಿ ಸಾಹುಲ್ ಹಮೀದ್ ಎಂಬುವರ ತಾಯಿಯ ಹೆಸರಿಂದ ಸಾಹುಲ್​ ಹೆಸರಿಗೆ 10.4 ಸೆಂಟ್ಸ್ ಜಾಗದ ಖಾತೆ ಬದಲಾವಣೆಗೆ 9/11ರ ಅರ್ಜಿ ಸಲ್ಲಿಸಿದ್ದರು. ಮೊದಲು 8 ಸಾವಿರ ರೂ. ಜಮಾ ಮಾಡಿದ್ದಾರೆ. ಮತ್ತೆ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸೋಮವಾರ ಗುರುವಾಯನಕೆರೆಗೆ ಬಂದು ಹಣ ನೀಡುವಂತೆ ಹೇಳಿದ್ದರಂತೆ. 9 ಸಾವಿರ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ. ಬಂಧಿಸಿ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೊಳಪಡಿಸಿದ್ದಾರೆ.

ಪಶ್ಚಿಮ ವಲಯ ಎಸಿಬಿ ಎಸ್​ಪಿ ಉಮಾ ಪ್ರಶಾಂತ್ ಅವರ ನಿರ್ದೇಶನದ ಮೇರೆಗೆ ಇನ್ಸ್​ಪೆಕ್ಟರ್ ಮೋಹನ್ ಕೊಟ್ಟಾರಿ, ಉಡುಪಿ ಇನ್ಸ್​ಪೆಕ್ಟರ್ ಜಯರಾಂ ಗೌಡ, ಸಿಬ್ಬಂದಿ ಹರಿಪ್ರಸಾದ್, ಗಣೀಶ್, ಉಮೇಶ್, ರಾಧಾಕೃಷ್ಣ ಡಿ.ಎ., ರಾಧಾಕೃಷ್ಣ ಕೆ., ಪ್ರಶಾಂತ್, ರಾಕೇಶ್, ಅಬ್ದುಲ್ ಜಲಲ್, ಪ್ರಸನ್ನ, ನಯನಾ, ವೈಶಾಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Last Updated : Jun 4, 2019, 11:01 AM IST

ABOUT THE AUTHOR

...view details