ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಮತ್ತೋರ್ವ ಸರಪಂಚ್ ಭಯೋತ್ಪಾದಕರ ಗುಂಡಿಗೆ ಬಲಿ

ಕಣಿವೆನಾಡು ಕಾಶ್ಮೀರದಲ್ಲಿ ಸರಪಂಚ್​​ಗಳ ಮೇಲೆ ಆಗಾಗ ಭಯೋತ್ಪಾದನಾ ದಾಳಿಗಳು ನಡೆಯುತ್ತಿದ್ದು, ಇಂದು ಸಂಜೆ ಸಮೀರ್ ಅಹ್ಮದ್ ಭಟ್ ಎಂಬುವವರ ಮೇಲೆ ದಾಳಿ ನಡೆದಿದೆ.

By

Published : Mar 9, 2022, 9:18 PM IST

Unidentified gunmen shot dead a sarpanch in  Srinagar
ಕಾಶ್ಮೀರದಲ್ಲಿ ಮತ್ತೊಬ್ಬ ಸರಪಂಚ್​ನ ಹತ್ಯೆ

ಶ್ರೀನಗರ(ಜಮ್ಮು ಕಾಶ್ಮೀರ):ಕಾಶ್ಮೀರದಲ್ಲಿ ಸರಪಂಚ್​​ಗಳ ಮೇಲಿನ ಭಯೋತ್ಪಾದಕ ದಾಳಿ ಸರಣಿ ಮುಂದುವರೆದಿದೆ. ಕೆಲ ದಿನಗಳ ಹಿಂದಷ್ಟೇ ಸರಪಂಚ್ ಮೇಲೆ ದಾಳಿಯ ವರದಿಯಾಗಿದ್ದು, ಇದೀಗ ಶ್ರೀನಗರದ ಖೋನ್ಮೋಹ್ ಪ್ರದೇಶದಲ್ಲಿ ಮತ್ತೊಬ್ಬ ಸರಪಂಚ್​ನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.

ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ. ಹತ್ಯೆಯಾದ ಸರಪಂಚ್​ನನ್ನು ಸಮೀರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಶ್ರೀನಗರ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಹಂತಕರನ್ನು ಹಿಡಿಯಲು ತನಿಖೆ ಆರಂಭಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ನಿಗೂಢ ಸ್ಫೋಟ: ಓರ್ವ ಸಾವು, 14 ಮಂದಿಗೆ ಗಾಯ

ABOUT THE AUTHOR

...view details