ದಾಮೋಹಾ (ಮಧ್ಯಪ್ರದೇಶ):ಬಿಜೆಪಿ ಶಾಸಕನೋರ್ವನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಘರ್ಷ ಉಂಟಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬಿಜೆಪಿ ಶಾಸಕ ಧರ್ಮೇಂದ್ರ ಲೂಧಿ ರಾತ್ರಿ ವೇಳೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ವೇಳೆ ಸಂಘರ್ಷ ಏರ್ಪಟ್ಟಿದ್ದು, ಈ ವೇಳೆ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಮೃತರನ್ನ ಜೋಗೇಂದ್ರ ಸಿಂಗ್ ಹಾಗೂ ಅರವಿಂದ್ ಜೈ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸಾರ್ವಜನಿಕರ ಕೋಪದಿಂದ ಬಿಜೆಪಿಗೆ ತೊಂದರೆಯಿಲ್ಲ, ಅದು ಇವಿಎಂಗಳ ಮೇಲೆ ಅವಲಂಬಿತ: ದಿಗ್ವಿಜಯ್
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿರುವ ಅರವಿಂದ್ ಜೈ ಶಾಸಕರ ಪ್ರತಿನಿಧಿಯಾಗಿದ್ದು, ಜೋಗೇಂದ್ರ ಅತಿಥಿ ಉಪನ್ಯಾಸಕನಾಗಿದ್ದನು ಎಂದು ತಿಳಿದು ಬಂದಿದೆ. ಘಟನೆ ನಡೆದ ವೇಳೆ ಶಾಸಕರು ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.